Advertisement

ಸಿಡಿಯುತ್ತಿದೆ ಕ್ಷಿಪಣಿ; ಪಾರು ಮಾಡಿ ಪ್ಲೀಸ್‌ ಭಾರತೀಯ ವಿದ್ಯಾರ್ಥಿಗಳ ಅಳಲು

09:52 PM Mar 04, 2022 | Team Udayavani |

ನವದೆಹಲಿ/ಕೀವ್‌: “ಪ್ಲೀಸ್‌ ನಮ್ಮನ್ನು ಸುಮಿ ನಗರದಿಂದ ತಕ್ಷಣ ಪಾರು ಮಾಡಿ. ಇಲ್ಲಿ ಕ್ಷಿಪಣಿ ದಾಳಿಯಾಗುತ್ತಿದೆ. ಆಹಾರ, ಕುಡಿವ ನೀರು ಸಿಗುವುದು ಕಮ್ಮಿಯಾಗಿದೆ. ಇಲ್ಲಿ 700-800 ಮಂದಿ ಭಾರತದ ವಿದ್ಯಾರ್ಥಿಗಳಿದ್ದಾರೆ’

Advertisement

– ಇದು ಯುದ್ಧ ಪೀಡಿತ ಉಕ್ರೇನ್‌ನ ಈಶಾನ್ಯ ಭಾಗದ ನಗರ ಸುಮಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳು ದುಃಖ ತೋಡಿಕೊಂಡ ಪರಿ. ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಇಲ್ಲವೆಂದು ದೂರಿದ್ದಾರೆ. ಹೀಗಾಗಿ, ಅವರು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಪತ್ರ ಬರೆದು, ಕ್ಷಿಪ್ರವಾಗಿ ರಕ್ಷಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ. ಅವರೆಲ್ಲರೂ ಸುಮಿ ಸ್ಟೇಟ್‌ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್‌ ಕಲಿಯುತ್ತಿದ್ದಾರೆ.

ಕುಡಿವ ನೀರಿಗಾಗಿ ವಿದ್ಯಾರ್ಥಿಗಳು ಮಂಜುಗಡ್ಡೆ ಹೆಕ್ಕಿಕೊಂಡು ಬಿಸಿ ಮಾಡಿ ನೀರು ಮಾಡುವ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಮೆಹೆಕ್‌ ಶೇಖ್‌ ಎಂಬ ವಿದ್ಯಾರ್ಥಿನಿ ಅವರು ಇರುವ ಸ್ಥಳದಲ್ಲಿ ಶೆಲ್‌ ದಾಳಿಯಾಗುವ ಬಗ್ಗೆ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಜತೆಗೆ ಆಹಾರ ಮತ್ತು ನೀರಿನ ಕೊರತೆ ಇದೆ ಎಂದು ದೂರಿದ್ದಾರೆ. ರಾಧಿಕಾ ಸಗ್ವಾನ್‌ ಎಂಬ ವೈದ್ಯ ವಿದ್ಯಾರ್ಥಿನಿ 700-800 ಮಂದಿ ವೈದ್ಯ ವಿದ್ಯಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ನಮ್ಮೆಲ್ಲರನ್ನು ಪಾರು ಮಾಡುವ ಯಾವ ಸುಳಿವೂ ಇಲ್ಲ. ಈ ಪ್ರದೇಶದಲ್ಲಿ 7 ದಿನ ದಾಳಿ ನಡೆಯುತ್ತಿದೆ ಎಂದು ಅವರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

ರಷ್ಯಾದ ಕ್ಷಿಪಣಿ, ಬಾಂಬ್‌ ದಾಳಿಯಿಂದಾಗಿ ಸುಮಿ ನಗರದ ಸುತ್ತಮುತ್ತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆಗಳು ಧ್ವಂಸಗೊಂಡಿವೆ.

ಅಪಾಯದಲ್ಲಿದ್ದಾರೆ 1 ಸಾವಿರ ವಿದ್ಯಾರ್ಥಿಗಳು
ಯುದ್ಧಪೀಡಿತ ಉಕ್ರೇನ್‌ನಲ್ಲಿ 1 ಸಾವಿರ ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪೈಕಿ ಸುಮಿಯಲ್ಲಿ 700, 300 ಮಂದಿ ಖಾರ್ಕಿವ್‌ನಲ್ಲಿ ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರನ್ನು ಪಾರು ಮಾಡುವುದೇ ಸರ್ಕಾರದ ಆದ್ಯತೆ. ಬಸ್‌ಗಳ ಮೂಲಕ ಅವರನ್ನು ಗಡಿ ದಾಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ. ಇನ್ನೂ 2ರಿಂದ 3 ಸಾವಿರ ಮಂದಿ ಭಾರತೀಯರು ಇದ್ದಾರೆ. ಆಪರೇಷನ್‌ ಗಂಗಾ ಮೂಲಕ ಆ ದೇಶದಿಂದ ಎಲ್ಲರನ್ನೂ ಪಾರು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸ್ಥಳೀಯವಾಗಿ ಕದನ ವಿರಾಮ ಉಂಟಾದರೆ ಕೊಂಚ ಅನುಕೂಲವಾಗಲಿದೆ ಎಂದರು ಬಗಚಿ. ಮುಂದಿನ 24 ಗಂಟೆಗಳಲ್ಲಿ 16 ವಿಮಾನಗಳ ಮೂಲಕ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದರು. ಫೆ.15ರ ಬಳಿಕ ಸುಮಾರು 20 ಸಾವಿರ ಮಂದಿ ಉಕ್ರೇನ್‌ ಗಡಿ ದಾಟಿದ್ದಾರೆ ಎಂದರು. ಇದುವರೆಗೆ 48 ವಿಮಾನಗಳ ಮೂಲಕ 10,300 ಮಂದಿ ವಿದ್ಯಾರ್ಥಿಗಳು ದೇಶಕ್ಕೆ ಆಗಮಿಸಿದ್ದಾರೆ ಎಂದರು.

Advertisement

ಇಂದು 11 ವಿಮಾನ ಆಗಮನ: 11 ವಿಮಾನ ಮತ್ತು ಐಎಎಫ್ನ 4 ವಿಮಾನಗಳ ಮೂಲಕ ಶನಿವಾರ 2,200ಕ್ಕೂ ಅಧಿಕ ಮಂದಿ ದೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಶುಕ್ರವಾರ 14 ವಿಮಾನಗಳು, ಐಎಎಫ್ನ ಮೂರು ವಿಮಾನಗಳ 3,772 ಮಂದಿ ಆಗಮಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next