Advertisement

ಕುಷ್ಟಗಿ : ತೋಟದಲ್ಲಿ ಕಂಡುಬಂದ ವಿಷಕಾರಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಯುವ ರೈತ

02:00 PM Feb 01, 2022 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನ ಮೆಣೆದಾಳ‌ ಪ್ರದೇಶದಲ್ಲಿನ ಯುವ ರೈತ ಸಂತೋಷ ಸರನಾಡಗೌಡ್ರು ಅವರ ತೋಟದಲ್ಲಿ ಕಂಡು ಬಂದ ವಿಷಕಾರಿ ಕನ್ನಡಿ ಹಾವನ್ನು (Russell’s viper) ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದ ಪ್ರಸಂಗ ನಡೆದಿದೆ.

Advertisement

ಸಂತೋಷ ಸರನಾಡಗೌಡರ ತೋಟದಲ್ಲಿ ಹೆಬ್ಬೇವು ಕಟಾವು ಮಾಡುತ್ತಿದ್ದ ಸಂದರ್ಭ ಮರದ ದಿಮ್ಮಿಯ ಅಡಿಯಲ್ಲಿ ಕನ್ನಡಿ ಹಾವು ಕಂಡು ಬಂದಿದೆ. ಕೂಡಲೇ ಸಂತೋಷ್ ಪಿವಿಸಿ ಪೈಪ್ ಮೂಲಕ ಹಾವನ್ನು ಸುರಕ್ಷಿತವಾಗಿ ಹಿಡಿದು ಟ್ರಾಕ್ಟರ್ ಟ್ರಾಲಿಯಲ್ಲಿ ಹಾಕಿ ಮಕ್ಕಳಿಗೆ ಹಾಗೂ ಮನೆಯವರಿಗೆ ಈ ಹಾವನ್ನು ತೋರಿಸಿ ಬಳಿಕ ಹಾವನ್ನು ದೂರದ ಗುಡ್ಡದ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

ತೀರ ವಿಷಕಾರಿಯಾದ ಈ ಹಾವನ್ನು ಯುವ ರೈತ ಹಿಡಿದು ಸಹಾಸ ಮಾಡಿರುವುದು ಅಶ್ಚರಿ ಕಾರಣವಾಗಿದೆ. ಇಂತಹ ಹಾವನ್ನು ಕಂಡರೆ ಕೊಂದು ಹಾಕುವ ಜನರ ಮಧ್ಯೆ ಸಂತೋಷ ಸರನಾಡಗೌಡರ ಅವರ ಹಾವಿನ ಸಂರಕ್ಷಣೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಉದಯವಾಣಿ ಯೊಂದಿಗೆ ಮಾತನಾಡಿದ ಸಂತೋಷ್, ಮಕ್ಕಳಿಗೆ ಹಾವುಗಳ ಬಗ್ಗೆ ಭಯ ಹುಟ್ಟಿಸಬಾರದು, ರಸ್ಸೆಲ್ ವೈಪರ್ ಈ ಹಾವು ತೀರ ವಿಷಕಾರಿ ಎನ್ನುವುದು ಗೊತ್ತು ಸುರಕ್ಷಿತ ಸಾಧನಗಳಿಂದ ಅವುಗಳಿಗೆ ತೊಂದರೆ ಆಗದಂತೆ ಹಿಡಿದು ಬೇರೆಡೆ ಬಿಟ್ಟು ಬಂದಿದ್ದೇನೆ.

ಇದನ್ನೂ ಓದಿ : ಹಾವು ಹಿಡಿಯುವ ಹೆಸರಾಂತ ವಾವಾ ಸುರೇಶ್ ಸ್ಥಿತಿ ಚಿಂತಾಜನಕ

Advertisement

ಕೊಳಕು ಮಂಡಲ,ಕೆರೆ ಹಾವು ನಾಗರಹಾವು, ಹಸಿರು ಹಾವು, ಹೆಬ್ಬಾವು ಹಾವುಗಳು ಈ ಪ್ರದೇಶದಲ್ಲಿ ಕಂಡು ಬರುತ್ತಿವೆ ಅವುಗಳ ಪಾಡಿಗೆ ಬಿಡುತ್ತಿದ್ದು ಹಾವುಗಳಿಗೆ ತೊಂದರೆ ಕೊಡುವುದಿಲ್ಲ. ನವಿಲುಗಳಿಂದ ಹಾವುಗಳು ಕಡಿಮೆಯಾಗಿವೆ ಎಂದು ಸಂತೋಷ ಸರನಾಡಗೌಡರ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next