Advertisement

ಶಿವಮೊಗ್ಗದಿಂದ ಶ್ರೀರಂಗಪಟ್ಟಣದ ವರೆಗೆ ಹರ್ಷನ ಅಸ್ತಿ ರಥಯಾತ್ರೆ : ಋಷಿಕುಮಾರ ಸ್ವಾಮೀಜಿ

02:29 PM Feb 22, 2022 | Team Udayavani |

ಚಿಕ್ಕಮಗಳೂರು : ಶಿವಮೊಗ್ಗ ನಗರದ ಸೀಗೆಹಟ್ಟಿ ಹಿಂದೂ ಸಂಘಟನೆಯ ಯುವಕ ಹರ್ಷ ಹತ್ಯೆ ನಡೆದಿದ್ದು, ಹರ್ಷನ ಅಸ್ತಿ ರಥಯಾತ್ರೆಗೆ ಗುರುವಾರ ಚಾಲನೆ ಪಡೆದುಕೊಳ್ಳಲಿದೆ ಎಂದು ಸಖರಾಯಪಟ್ಟಣ ಸಮೀಪದ ಕಾಳಿಮಠದ ಋಷಿಕುಮಾರ ಸ್ವಾಮೀಜಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಫೆ.24ರಂದು ಶಿವಮೊಗ್ಗದಿಂದ ಶ್ರೀರಂಗಪಟ್ಟಣದ ವರೆಗೆ ಅಸ್ತಿ ರಥಯಾತ್ರೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎಂದರು.

ಅಸ್ತಿಯಾತ್ರೆ ಶಿವಮೊಗ್ಗ, ತರೀಕೆರೆ,ಕಡೂರು, ಅರಸೀಕೆರೆ, ಚನ್ನರಾಯಣ ಪಟ್ಟಣದ ಮಾರ್ಗವಾಗಿ ಸಾಗಲಿದೆ. ಸಾರ್ವಜನಿಕರು, ಸಂಘಟನೆಯ ಕಾರ್ಯಕರ್ತರು ಅಸ್ತಿದರ್ಶನ ಪಡೆದುಕೊಳ್ಳಬಹುದು ಎಂದರು.

ಶ್ರೀರಂಗಪಟ್ಟಣದಲ್ಲಿ ಭಾನು ಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಸ್ತಿ ವಿಸರ್ಜನೆಗೆ ಚಿಂತನೆ. ಪಾಪ ನಾಶಿನಿಯಲ್ಲಿ ಅಸ್ತಿ ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಹಿಂದೂಗಳ ರಕ್ಷಣೆ ನೀವು ಮಾಡುತ್ತೀರೋ, ನಾವೇ ಮಾಡಬೇಕಾ ? ಸರಕಾರಕ್ಕೆ ಸೂಲಿಬೆಲೆ ಪ್ರಶ್ನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next