Advertisement

ಗ್ರಾಮೀಣ ರಸ್ತೆ-ದುರಸ್ತಿಗೆ ಆದ್ಯತೆ: ಗುತ್ತೇದಾರ

12:30 PM Feb 14, 2022 | Team Udayavani |

ಆಳಂದ: 2021-22ನೇ ಸಾಲಿನ ಕೆಕೆಆರ್‌ ಡಿಬಿ ಯೋಜನೆಯ 2.35 ಕೋಟಿ ರೂ. ಅನುದಾನದ ಅಡಿಯಲ್ಲಿ 2.35 ಕೋಟಿ ರೂ. ವೆಚ್ಚದ ಧಂಗಾಪುರ-ಭೂಸನೂರ ಮುಖ್ಯ ರಸ್ತೆ ನಿರ್ಮಾಣದ ಭೂಮಿ ಪೂಜೆಯನ್ನು ಶಾಸಕ ಸುಭಾಷ ಆರ್‌. ಗುತ್ತೇದಾರ ನೆರವೇರಿಸಿದರು.

Advertisement

ಆಳಂದ ಮತ್ತು ಅಫಜಲಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖವಾಗಿ ಧಂಗಾಪುರ-ಭೂಸನೂರ ರಸ್ತೆ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿಸಿದ ತೃಪ್ತಿ ನನ್ನದಾಗಿದೆ ಎಂದು ಹೇಳಿದರು.

ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಗಾಣಗಾಪುರಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಅವರ ಅನೂಕೂಲಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆ ಅವಶ್ಯಕತೆ ಇತ್ತು. ಈ ಭಾಗದ ಜನರು ಬಹಳ ಸಲ ಈ ಕುರಿತು ಹೇಳಿದ್ದರು. ಈಗ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.

ಬಿಜೆಪಿ ಮುಖಂಡ ವೀರಣ್ಣ ಮಂಗಾಣಿ, ರಾಜಶೇಖರ ಮಲಶೆಟ್ಟಿ, ವನಿತೇಶ ಗುತ್ತೇದಾರ, ಅಶೋಕ ಗುತ್ತೇದಾರ, ಎಇಇ ಅರುಣಕುಮಾರ ಬಿರಾದಾರ ಹಾಗೂ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next