Advertisement

ಸಮರೋಪಾದಿ ಸ್ಯಾನಿಟೈಸ್‌ಗೆ ಚಾಲನೆ

09:47 PM May 31, 2021 | Team Udayavani |

ಸಿಂಧನೂರು: ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಹಳ್ಳಿಗಳ ವ್ಯಾಪ್ತಿಯಲ್ಲಿ ಸ್ಯಾನಿಟೈಸ್‌ ಮಾಡಿಸಲು 27 ವಾಹನಗಳಿಗೆ ಭಾನುವಾರ ಚಾಲನೆ ನೀಡಲಾಯಿತು.

Advertisement

ಬಸನಗೌಡ ಬಾದರ್ಲಿ ಫೌಂಡೇಶನ್‌ ನಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ವಿವಿಧ ಮಠಾ ಧೀಶರು ಚಾಲನೆ ನೀಡಿದರು. ದಿನದಿಂದ ದಿನಕ್ಕೆ ಕೊರೊನಾ 2ನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆ 26 ಗ್ರಾಪಂ ವ್ಯಾಪ್ತಿಯಲ್ಲೂ ಸ್ಯಾನಿಟೈಸ್‌ ಮಾಡಿಸಲು ನಿರ್ಧರಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೂ ತಲುಪಿ ಸ್ಯಾನಿಟೈಸ್‌ ಮಾಡಲಾಗುವುದು ಎಂದು ತಿಳಿಸಿದರು.

ಮುಖಂಡ ಬಸನಗೌಡ ಬಾದರ್ಲಿ, ರಂಭಾಪುರಿ ಖಾಸಾಶಾಖಾಮಠದ ಸೋಮನಾಥ ಶಿವಾಚಾರ್ಯ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮಿಗಳು, ಬಳಗಾನೂರಿನ ಸಿದ್ಧಬಸವ ಶ್ರೀಗಳು, ಗೋನವಾರದ ಮಲ್ಲಯ್ಯ ತಾತಾ, ನಂಜುಂಡಯ್ಯ ಗುರುವಿನ್‌, ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ, ಕಾಂಗ್ರೆಸ್‌ ಹಿರಿಯ ಮುಖಂಡರಾದ ಶಿವಕುಮಾರ ಜವಳಿ, ಸುರೇಶ್‌ ನಹಾರ್‌ ಸೇs…, ಶರಣಯ್ಯಸ್ವಾಮಿ ಕೋಟೆ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next