Advertisement

“ಬೀರ್‌ಬಲ್‌’ಜೊತೆಯಾದ ರುಕ್ಮಿಣಿ ವಸಂತ್‌

04:15 PM Oct 30, 2017 | |

“ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಮಾಡಿದ್ದ ಎಂ.ಜಿ. ಶ್ರೀನಿವಾಸ್‌ ಅಲಿಯಾಸ್‌ ಆರ್ಜೆ ಶ್ರೀನಿ, ಈಗ  ಹೊಸ ಚಿತ್ರದೊಂದಿಗೆ ವಾಪಸ್ಸು ಬಂದಿದ್ದಾರೆ. ಈಗ ಶ್ರೀನಿ, “ಬೀರ್ಬಲ್‌’ ಟ್ರಯಾಲಜಿ ಮಾಡುವುದಕ್ಕೆ ಹೊರಟಿದ್ದಾರೆ. ಈ “ಬೀರ್‌ಬಲ್‌’ ಟ್ರಯಾಲಜಿಯ ಮೊದಲ ಭಾಗವಾದ “ಫೈಂಡಿಂಗ್‌ ವಜ್ರಮುನಿ’ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

Advertisement

ನಟ ನೀನಾಸಂ ಸತೀಶ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. “ಫೈಂಡಿಂಗ್‌ ವಜ್ರಮುನಿ’ ನಂತರ “ಅವರನ್‌ ಬಿಟ್‌ ಇವರನ್‌ ಬಿಟ್‌ ಅವರ್ಯಾರು’ ಮತ್ತು “ತುರೇ ಮಣೆ’ ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂರು ಚಿತ್ರಗಳಲ್ಲಿ ಬೀರ್‌ಬಲ್‌ ಎಂಬ ಲಾಯರ್‌ನ ಕಥೆ ಹೇಳುವುದಕ್ಕೆ ಶ್ರೀನಿ ಹೊರಟಿದ್ದು, ಆ ಲಾಯರ್‌ನ ಮೂರು ಸಾಹಸಗಳನ್ನು ಮೂರು ವಿಭಿನ್ನ ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಇಲ್ಲಿ ಬೀರ್‌ಬಲ್‌ ಎಂಬ ಲಾಯರ್‌ ಪಾತ್ರವನ್ನು ಅವರೇ ಮಾಡುತ್ತಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ. ಇನ್ನು ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು “ಜಾನ್‌ ಸೀನ’ ಮತ್ತು “ಚಮಕ್‌’ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ಬ್ಯಾನರ್‌ನ ಮೂರನೆಯ ಚಿತ್ರ. 

Advertisement

Udayavani is now on Telegram. Click here to join our channel and stay updated with the latest news.

Next