Advertisement

ಚಾಮುಂಡಿಬೆಟ್ಟದ ನಂದಿಗೆ ರುದ್ರಾಭಿಷೇಕ

06:00 AM Nov 26, 2018 | Team Udayavani |

ಮೈಸೂರು: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಬೆಟ್ಟದ ಬಳಗ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ 13ನೇ ವರ್ಷದ ಮಹಾಭಿಷೇಕವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
 
ಚಾಮುಂಡಿಬೆಟ್ಟದ ನಂದಿ ಆವರಣದಲ್ಲಿ ಭಾನುವಾರ ನಡೆದ ಮಹಾರುದ್ರಾಭಿಷೇಕಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌ ಚಾಲನೆ ನೀಡಿದರು. ಬೆಳಗ್ಗೆ 10.30ರಿಂದ ಆರಂಭವಾದ ಮಹಾರುದ್ರಾಭಿಷೇಕಕ್ಕೂ ಮುನ್ನ ನಂದಿ ಮೂರ್ತಿಯನ್ನು ನೀರಿನಿಂದ ಸ್ವತ್ಛಗೊಳಿಸಲಾಯಿತು. ಬಳಿಕ ಹೂ ಹಾಗೂ ಕುಂಕುಮಾರ್ಚನೆ ಸಲ್ಲಿಸಿ, ಅಘÂì, ಪಾದ್ಯ, ಆಚಮನ,ಮಧುಪರ್ಕ, ಹಾಲು, ಮೊಸರಿಂದ ನಂದಿಗೆ ಅಭಿಷೇಕ ಮಾಡಲಾಯಿತು. ಬಳಿಕ, ಅರಿಶಿನ, ಕುಂಕುಮ, ಹಾಲು, ತುಪ್ಪ,ಜೇನು, ನಾಣ್ಯ, ಸುಗಂಧ ತೈಲ, ವಿಭೂತಿ, ನೀರು, ಎಳೆನೀರು, ಹಾಲು, ಶ್ರೀಗಂಧ ಸೇರಿದಂತೆ 32 ವಿವಿಧ ಬಗೆಯ ದ್ರವ್ಯಗಳಿಂದ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ನಂತರ, ನಂದಿಗೆ ಪುಷ್ಪಾಲಂಕಾರ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next