Advertisement

ಆರ್ ಟಿಪಿಎಸ್ ನಲ್ಲಿ ಕಲ್ಲಿದ್ದಿಲು ಪೂರೈಸುವ ಪೈಪ್ ಲೈನ್ ಒಡೆದು ಒಂದನೇ ಘಟಕ ಸ್ಥಗಿತ

12:20 PM Aug 10, 2022 | Team Udayavani |

ರಾಯಚೂರು : ರಾಯಚೂರು ಶಾಖೋತ್ಪನ್ನ ಕೇಂದ್ರದ ಒಂದನೇ ಘಟಕಕ್ಕೆ ಕಲ್ಲಿದ್ದಿಲು ಪೂರೈಸುವ ಪೈಪ್ ಒಡೆದಿದೆ. ಸುಮಾರು 40 ವರ್ಷಗಳ ಹಳೆಯ ಪೈಪ್ ಇದಾಗಿದ್ದು, ಬುಧವಾರ ಬೆಳಗ್ಗೆ ಡ್ಯಾಮೇಜ್ ಆಗಿದೆ. ಇದರಿಂದ ಘಟಕ ಸ್ಥಗಿತಗೊಂಡಿದೆ.

Advertisement

ಕಳೆದ ಕೆಲ ದಿನಗಳಿಂದ ವಿದ್ಯುತ್ ಬೇಡಿಕೆ ಇಲ್ಲದ್ದಕ್ಕೆ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಚೆಗೆ ಆರಂಭಿಸುತ್ತಿದ್ದಂತೆ ಸಮಸ್ಯೆ ಎದುರಾಗಿದೆ. ಒಂದನೇ ಘಟಕದ ಜೀವಿತಾವಧಿ ಮುಗಿದ ಕಾರಣ ಸಂಪೂರ್ಣ ತೆರವುಗೊಳಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತು.

ತಾಂತ್ರಿಕ ತಜ್ಞರು ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯದ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಶಶಿಕಾಂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next