Advertisement

RTI ಕಾರ್ಯಕರ್ತರ ರೀತಿ ರಾಜ್ಯಪಾಲರ ಕೆಲಸ: ಸಚಿವ ದಿನೇಶ್‌ ಗುಂಡೂರಾವ್‌

11:36 PM Sep 22, 2024 | Team Udayavani |

ಬೆಂಗಳೂರು: ರಾಜ್ಯಪಾಲರು ಆರ್‌ಟಿಐ ಕಾರ್ಯಕರ್ತರಂತೆ ತಮಗೆ ಸಲ್ಲಿಕೆಯಾಗುವ ಪ್ರತಿ ಅರ್ಜಿಗಳನ್ನು ತೆಗೆದುಕೊಂಡು ಮಾಹಿತಿ ಕೇಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟೀಕಿಸಿದರು.

Advertisement

ನಗರದಲ್ಲಿ ಅವರು ಮಾತನಾಡಿ, ಯಾರ್ಯಾರೋ ಕೊಟ್ಟ ಅರ್ಜಿಗಳ ಮಾಹಿತಿ ಕೇಳುತ್ತಿದ್ದಾರೆ. ಯಾವ ರಾಜ್ಯಪಾಲರೂ ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕೇಳುವುದಿಲ್ಲ. ಒಂದು ರೀತಿ ಆರ್‌ಟಿಐ ಕಾರ್ಯಕರ್ತರಂತೆ ನಮ್ಮ ರಾಜ್ಯಪಾಲರು ಸರಕಾರದ ವಿವಿಧ ಇಲಾಖೆಗಳಿಗೆ ಮಾಹಿತಿ ಕೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಯಾವ ಪ್ರಕರಣಕ್ಕೆ ಆದ್ಯತೆ ಕೊಡಬೇಕಿತ್ತು, ರಾಜ್ಯಪಾಲರು ಅದಕ್ಕೆ ಆದ್ಯತೆ ಕೊಟ್ಟಿಲ್ಲ. ಸ್ಪಷ್ಟ ಮಾಹಿತಿ ಇದ್ದು, ಪೊಲೀಸ್‌ ತನಿಖೆಗೆ ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next