Advertisement

ದೆಹಲಿಯಲ್ಲಿ VHP ರ‍್ಯಾಲಿ: ಕೇಂದ್ರದ ವಿರುದ್ಧವೇ RSS ನಾಯಕರ ಆಕ್ರೋಶ

03:41 PM Dec 09, 2018 | Team Udayavani |

ಹೊಸದಿಲ್ಲಿ: ವಿಶ್ವಹಿಂದು ಪರಿಷತ್ ನೇತೃತದಲ್ಲಿ  ರಾಮ್‌ಲೀಲಾ ಮೈದಾನದಲ್ಲಿ  ಭಾನುವಾರ  ಬೃಹತ್‌ ರ‍್ಯಾಲಿ ನಡೆಸಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರವನ್ನು ಆಗ್ರಹಿಸಲಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧವೇ ಆರ್‌ಎಸ್‌ಎಸ್‌ ನಾಯಕರು ಪರೋಕ್ಷ ಆಕ್ರೋಶ ಹೊರ ಹಾಕಿದ್ದಾರೆ.

Advertisement

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ ಕಾರ್ಯ ನಿರ್ವಾಹಕರಾಗಿರುವ ಸುರೇಶ್‌ ಭಯ್ನಾಜಿ  ಜೋಷಿ, ‘ಯಾರು ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರದಲ್ಲಿದ್ದಾರೋ ಅವರು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಬೇಡಿಕೆ ಈಡೇರಿಸಬೇಕು’ ಎಂದಿದ್ದಾರೆ. 

ಬಿಜೆಪಿ ಹೆಸರು ಹೇಳದೆ ಜೋಷಿ ಈ ಮಾತು ಹೇಳಿದ್ದು,’ನಾವು ಮಂದಿನ ನಿರ್ಮಾಣ ಮಾಡಬೇಕು ಎಂದು ಬೇಡುವುದಿಲ್ಲ. ನಾವು ನಮ್ಮ ಭಾವನೆಗಳನ್ನು ಹೊರಹಾಕುತ್ತಿದ್ದೇವೆ. ದೇಶಕ್ಕೆ ರಾಮ ಮಂದಿರದ ಅಗತ್ಯವಿದೆ’ ಎಂದಿದ್ದಾರೆ.

ರ‍್ಯಾಲಿಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಚಳಿಗಾಲದ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next