Advertisement

ರಾಮಮಂದಿರ ಟ್ರಸ್ಟ್‌ಗೆ ಆರೆಸ್ಸೆಸ್‌ ನೇತೃತ್ವ?

09:53 AM Nov 26, 2019 | Team Udayavani |

ಭದೋಯಿ: ಅಯೋಧ್ಯೆಯಲ್ಲಿ ರಾಮ ಮಂದಿರ ರಚನೆಗಾಗಿ ಕೇಂದ್ರ ರಚಿಸಲಿರುವ ಟ್ರಸ್ಟ್‌ಗೆ ಆರ್‌ಎಸ್‌ಎಸ್‌ ಮುಖ್ಯಸ್ಥರೇ ನೇತೃತ್ವ ವಹಿಸಬೇಕು ಎಂದು ಅಯೋಧ್ಯೆಯ ತಪಸ್ವಿಜಿ ಕಿ ಛವಾನ್‌ನ ಮಹಾಂತ ಪರಮಹಂಸ ಜಿ ಮಹಾರಾಜ್‌ ಹೇಳಿದ್ದಾರೆ.

Advertisement

ಸೋಮವಾರ ಉತ್ತರ ಪ್ರದೇಶದ ಭದೋಹಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ಕೆಲಸವೇ ಆಗಲಿ ಅಥವಾ ಮಂದಿರ ನಿರ್ಮಾಣ ಕಾರ್ಯವೇ ಆಗಲಿ ಆರ್‌ಎಸ್‌ಎಸ್‌ನ ಕೆಲಸ ಶ್ಲಾಘನೀಯ ಎಂದರು.

ಗ್ರಾಮ ಮಟ್ಟದಿಂದ ಅವರ ಕೆಲಸ ಸ್ತುತ್ಯರ್ಹವಾದದ್ದು ಎಂದರು. ರಾಮಜನ್ಮಭೂಮಿ ನ್ಯಾಸ್‌ ಮುಖ್ಯಸ್ಥ ನೃತ್ಯ ಗೋಪಾಲದಾಸ್‌ ಮತ್ತು ಅದರ ಸದಸ. ರಾಮ ವಿಲಾಸ್‌ ವೇದಾಂತಿ ವಿರುದ್ಧ ಅವರು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next