Advertisement

ಪಾಲಿಕೆಗೆ 19.85 ಕೋಟಿ ರೂ. ನಷ್ಟ

11:59 AM Aug 19, 2018 | Team Udayavani |

ಬೆಂಗಳೂರು: ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯಿಂದ (ಕೆಯುಐಡಿಎಫ್ಸಿ) ಬಿಬಿಎಂಪಿ ಪಡೆದಿದ್ದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 19.85 ಕೋಟಿ ರೂ. ಬಡ್ಡಿ ಪಾವತಿಸಿರುವುದು ಲೆಕ್ಕಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ.

Advertisement

ಕೆಯುಐಡಿಎಫ್ಸಿಯಿಂದ ಪಾಲಿಕೆಯು ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 73.40 ಕೋಟಿ ರೂ. ಸಾಲ ಪಡೆದಿತ್ತು. ಅದರಂತೆ 2005-06ರಿಂದ 2009-10ರ ಅವಧಿಯಲ್ಲಿ 19 ಕಂತುಗಳಲ್ಲಿ ಸಾಲ ಮರುಪಾವತಿಸಬೇಕಿತ್ತು. ಆದರೆ, ಪಾಲಿಕೆಯಿಂದ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿಲ್ಲ. 

ಸಾಲ ಮರುಪಾವತಿಸುವಂತೆ ಕೆಯುಐಡಿಎಫ್ಸಿ 22 ಬಾರಿ ಪಾಲಿಕೆಗೆ ಡಿಮ್ಯಾಂಡ್‌ ನೋಟಿಸ್‌ ಜಾರಿಗೊಳಿಸಿದೆ. ಆದರೂ ಪಾಲಿಕೆ ಅಧಿಕಾರಿಗಳು ಸಾಲ ಮರುಪಾವತಿಸಿಲ್ಲ. ಇದರಿಂದಾಗಿ ಕೆಯುಐಡಿಎಫ್ಸಿಯು ಬಾಕಿ ಸಾಲಕ್ಕೆ 19.85 ಕೋಟಿ ರೂ. ಬಡ್ಡಿ ವಿಧಿಸಿದೆ. ಪಾಲಿಕೆ ಅಧಿಕಾರಿಗಳ ಹೊಣೆಗೇಡಿತನದಿಂದಾಗಿ ತೆರಿಗೆದಾರರ ಹಣ ಪೋಲಾಗಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next