Advertisement

ಪಾದಾಳ –ಕುಕ್ಕ ಮಜಲು ರಸ್ತೆಗೆ 2.50 ಲಕ್ಷ ರೂ. ಅನುದಾನ 

12:00 PM Sep 23, 2018 | |

ಉಪ್ಪಿನಂಗಡಿ: ಪಾದಾಳ- ಕುಕ್ಕಮಜಲು ರಸ್ತೆಯ ನಾದುರಸ್ತಿ ಕುರಿತು ಉದಯವಾಣಿ- ಸುದಿನ ಪ್ರಕಟಿಸಿದ ಸಚಿತ್ರವರದಿಗೆ ತತ್‌ಕ್ಷಣ ಸ್ಪಂದಿಸಿರುವ ಗ್ರಾ.ಪಂ., 2.50 ಲಕ್ಷ ರೂ. ಮಂಜೂರು ಮಾಡಿದೆ.

Advertisement

ರಸ್ತೆ ಅವ್ಯವಸ್ಥೆ ಕುರಿತು ಸುದಿನ ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಈ ಭಾಗದ ಗ್ರಾ.ಪಂ. ಸದಸ್ಯರಾದ ರಾಜಗೋಪಾಲ ಹೆಗ್ಡೆ, ರಮೇಶ್‌ ಭಂಡಾರಿ, ಸುಂದರಿ ಹಾಗೂ ಕವಿತಾ ಅವರು ಜಿ.ಪಂ. ಎಂಜಿನಿಯರ್‌ ಸಂದೀಪ್‌ ಜತೆಗೂಡಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಗ್ರಾಮ ವಿಕಾಸ ಯೋಜನೆಯಡಿ 1.50 ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ 1 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್‌ ಕಾಮಗಾರಿ ನಿರ್ವಹಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಗ್ರಾ.ಪಂ. ಸದಸ್ಯ ರಾಜಗೋಪಾಲ ಹೆಗ್ಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next