Advertisement

ತುಮಕೂರಿಗೆ ಕೇಂದ್ರದಿಂದ 50 ಸಾವಿರ ಕೋಟಿ ರೂ.

06:35 AM Jul 15, 2018 | Team Udayavani |

ತುಮಕೂರು: ತುಮಕೂರನ್ನು ಕೈಗಾರಿಕಾ ಹಬ್‌ ಮಾಡಲು ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರೂ. ಬಂಡವಾಳ ತುಮಕೂರಿಗೆ ಬರುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ನಡೆದ ಎಚ್‌ಎಂಟಿಗೆ ಭಾವಪೂರ್ಣ ವಿದಾಯ, ಇಸ್ರೋಗೆ ಹೃದಯ ಸ್ಪರ್ಶಿ ಸ್ವಾಗತ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಅವರು, ಎಚ್‌ಎಂಟಿ ಜಾಗವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಜಮೀನು ನೋಂದಣಿ ಪತ್ರ ಹಸ್ತಾಂತರ ಮಾಡಿ ಮಾತನಾಡಿದರು. ತುಮಕೂರಿನಲ್ಲಿ ಇಸ್ರೋ ಸ್ಯಾಟ್‌ಲೆçಟ್‌ಗೆ ಬಳಕೆ ಆಗುವ ಉಪಕರಣಗಳ ಉತ್ಪಾದನೆ ಆಗಲಿದೆ. ಇದು ಹೆಮ್ಮೆಯ ಸಂಗತಿ.  ಜತೆಗೆ, ಈ ಎಚ್‌ಎಂಟಿ ಕಾರ್ಖಾನೆಯಲ್ಲಿ 40 ವರ್ಷಗಳ ಕಾಲ ಕೆಲಸ ಮಾಡಿದ ಕಾರ್ಮಿಕರ ಮಕ್ಕಳಿಗೆ ಉದ್ಯೋಗಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇನ್ನು 5 ವರ್ಷದಲ್ಲಿ ತುಮಕೂರಿನ ಚಿತ್ರಣವೇ ಬದಲಾಗಲಿದ್ದು ಚೆನ್ನೈ- ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ ಆರಂಭವಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next