Advertisement

50 ಕೋಟಿ ಹಂಚಲು ಡಿಕೆಶಿ ಅಣಿ: ರೇಣುಕಾಚಾರ್ಯ

11:18 AM May 17, 2019 | Team Udayavani |

ಕುಂದಗೋಳ: ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ ಅವರು ಶತಾಯ ಗತಾಯವಾಗಿ ಕುಸುಮಾವತಿ ಅವರನ್ನು ಗೆಲ್ಲಿಸಲು ವಾಮಮಾರ್ಗದ ಮೂಲಕ ಯತ್ನಿಸುತ್ತಿದ್ದು, ಕ್ಷೇತ್ರಾದ್ಯಂತ ಮತದಾರರಿಗಾಗಿ 50 ಕೋಟಿ ಹಣ ಹಂಚುವ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆರೋಪಿಸಿದರು.

Advertisement

ಬೆನಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಣದ ಮೂಲಕ ಕ್ಷೇತ್ರದ ಜನತೆಯನ್ನು ಕೊಳ್ಳುವ ಹುನ್ನಾರ ನಡೆಸಿದ್ದು, ಸಚಿವರ ಬೆಂಗಾವಲು ವಾಹನ ಮೂಲಕ ಹಣ ಹಂಚುತ್ತಿದ್ದಾರೆ. ಚುನಾವಣಾಧಿಕಾರಿಗಳು ತಕ್ಷಣ ಸಚಿವರಿಗೆ ನೀಡಿದ ಬೆಂಗಾವಲನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ ಮುಕ್ತಿ ಮಂದಿರಕ್ಕೆ ಹೋಗಿ ಹುಟ್ಟುಹಬ್ಬ ಆಚರಿಸುವ ಮೂಲಕ ಲಿಂಗಾಯತ ಮತಗಳ ಮೇಲೆ ಕಣ್ಣುಹಾಕಿದ್ದಾರೆ. ಎಂ.ಬಿ. ಪಾಟೀಲ ಹಾಗೂ ಡಿಕೆಶಿ ಧರ್ಮ ವಿಚಾರದಲ್ಲಿ ಡ್ರಾಮಾ ಮಾಡುತ್ತಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದು, ಬಿಎಸ್‌ವೈ ಹಾಗೂ ಚಿಕ್ಕನಗೌಡ್ರ ಮಾಡಿದ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಕಾರಣವಾಗಲಿವೆ ಎಂದು ಹೇಳಿದರು.

ತಾಪಂ ಸದಸ್ಯ ಗುರುಶಿದ್ಧಗೌಡ ಮೇಲ್ಮಾಳ್ಗಿ, ವಿರೂಪಾಕ್ಷಪ್ಪ, ಗದಿಗೆಪ್ಪ ರಾಯನಾಳ, ಶ್ರೀಕಾಂತ ಹೂಗಾರ, ಬಸವರಾಜ ಶಿವಕ್ಕನವರ, ಶಿವಾನಂದ ನವಲಗುಂದ, ಬಸುರಾಜ ಹೂಗಾರ, ಯೋಗೇಶ ಶಿವಳ್ಳಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next