Advertisement

ಬ್ಯಾಂಕ್‌ಗಳಿಂದ 40 ಸಾವಿರ ಕೋಟಿ ರೂ. ವಸೂಲು

12:30 AM Dec 31, 2018 | |

ಹೊಸದಿಲ್ಲಿ: ದಿವಾಳಿತನ ಕಾಯ್ದೆಯಿಂದಾಗಿ ಮರುಪಾವತಿಯಾಗದ ಸಾಲದ ವಸೂಲಾತಿಯಲ್ಲಿ ಬ್ಯಾಂಕ್‌ಗಳು ಮಹತ್ವದ ಪ್ರಗತಿ ಸಾಧಿಸಿದ್ದು, 2018 ಮಾರ್ಚ್‌ಗೆ ಕೊನೆಯಾದ ವಿತ್ತ ವರ್ಷದಲ್ಲಿ 40,400 ಕೋಟಿ ರೂ. ವಸೂಲು ಮಾಡ ಲಾಗಿದೆ. ದಿವಾಳಿತನ ಕಾಯ್ದೆ ಅಡಿ ಯಲ್ಲಿ 4900 ಕೋಟಿ ರೂ, ಸಫೇìಸಿ ಕಾಯ್ದೆ ಅಡಿಯಲ್ಲಿ 26,500 ಕೋಟಿ ರೂ. ವಸೂಲಾತಿ ಮಾಡಲಾಗಿದೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ವಿವರಿಸಿದೆ.

Advertisement

ಒಂದೆಡೆ ಬ್ಯಾಂಕ್‌ಗಳು ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದರೆ, ಇನ್ನೊಂದೆಡೆ ಸಫೇìಸಿ ಕಾಯ್ದೆಗೆ ತಂದ ತಿದ್ದು ಪಡಿ ಕೂಡ ನೆರವಾಗಿದೆ. ತಮ್ಮ ಸ್ವತ್ತು ವಿವರಗಳನ್ನು ಕೊಡದಿದ್ದರೆ ಸಾಲಗಾರರಿಗೆ ಮೂರು ತಿಂಗಳು ಶಿಕ್ಷೆ ವಿಧಿಸುವುದು ಹಾಗೂ ಸಾಲದಾತರು 30 ದಿನಗಳೊಳಗೆ ಅಡಮಾನ ವಿಟ್ಟು ಕೊಂಡ ಸ್ವತ್ತನ್ನು ಸ್ವಾಧೀಣಪಡಿಸಿಕೊಳ್ಳಬೇಕು ಎಂಬ ಕಾನೂನು ಹೆಚ್ಚು ಪ್ರಮಾಣದಲ್ಲಿ ವಸೂಲಾತಿಗೆ ನೆರವಾಗಿದೆ. ಇನ್ನೊಂದೆಡೆ ಲೋಕ ಅದಾಲತ್‌ ಹಾಗೂ ಸಾಲ ವಸೂಲಾತಿ ನ್ಯಾಯಮಂಡಳಿಗೆ ಪ್ರಕರಣಗಳನ್ನು ಉಲ್ಲೇಖೀಸಿದ ಸಂಖ್ಯೆಯೂ ಕಡಿಮೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next