Advertisement

ಸಿಎಂ ಪರಿಹಾರ ನಿಧಿಗೆ 2.69 ಕೋಟಿ ರೂ.ದೇಣಿಗೆ

11:30 PM Aug 13, 2019 | Lakshmi GovindaRaj |

ಬೆಂಗಳೂರು: ಪ್ರಕೃತಿ ವಿಕೋಪದ ಸಂತ್ರಸ್ತರ ನೆರವಿಗೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳೆದ ಶುಕ್ರವಾರದಿಂದ (ಆ.9) ಈವರೆಗೆ 2,69,59,825 ರೂ. ದೇಣಿಗೆ ಸಂಗ್ರಹವಾಗಿದೆ. ಆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ 101.7 ಕೋಟಿ ರೂ. ಲಭ್ಯವಿದೆ. ಮಂಗಳವಾರ 28 ಡಿ.ಡಿ. ಮೊತ್ತ 1.83 ಕೋಟಿ ರೂ. ಸೇರಿದಂತೆ ಒಟ್ಟು 2.50 ಕೊಟಿ ರೂ. ಸಂಗ್ರಹವಾಗಿದೆ.

Advertisement

ಪ್ರವಾಹಪೀಡಿತರಿಗೆ ನೆರವಾಗಲು ಇಚ್ಛಿಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕೆಳಕಂಡ ಬ್ಯಾಂಕ್‌ ಖಾತೆಗೆ ನೇರವಾಗಿ ಆನ್‌ಲೈನ್‌ನ ಮೂಲಕ ಹಣ ವರ್ಗಾಯಿಸಬಹುದು. ಚೆಕ್‌ ಅಥವಾ ಡಿ.ಡಿ ಮೂಲಕ ದೇಣಿಗೆ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಕಳುಹಿಸಬಹುದು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಖಾತೆಯ ಹೆಸರು: ಚೀಫ್ ಮಿನಿಸ್ಟರ್‌ ರಿಲೀಫ್ ಫ‌ಂಡ್‌ ನ್ಯಾಚುರಲ್‌ ಕೆಲಾಮಿಟಿ

ಬ್ಯಾಂಕ್‌ ಹೆಸರು: ಎಸ್‌ಬಿಐ ಬ್ಯಾಂಕ್‌ (ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ)

ಶಾಖೆ: ವಿಧಾನಸೌಧ ಶಾಖೆ, ಖಾತೆ ಸಂಖ್ಯೆ: 37887098605, ಐಎಫ್ಎಸ್‌ಸಿ ಕೋಡ್‌: SBIN0040277, ಎಂಐಸಿಆರ್‌ ಸಂಖ್ಯೆ: 560002419

Advertisement
Advertisement

Udayavani is now on Telegram. Click here to join our channel and stay updated with the latest news.

Next