Advertisement

ದುಬಾೖಗೆ ಹೋದ ವ್ಯಕ್ತಿಗೆ 18 ಲಕ್ಷ ರೂ. ಬಿಲ್‌ ಶಾಕ್‌

01:01 AM Mar 25, 2019 | Team Udayavani |

ದುಬಾೖ: ಪಂಜಾಬ್‌ ಮೂಲದ ಸುರೇಂದ್ರ ನಾಥ್‌ ಖನ್ನಾ (66)ಎಂಬುವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ದುಬಾೖನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಬಿಲ್‌ 18 ಲಕ್ಷ ರೂ. ಆಗಿದೆ ಎಂದು ಯುಎಇ ಮಾಧ್ಯಮಗಳು ವರದಿ ಮಾಡಿವೆ.

Advertisement

ಖನ್ನಾ ಅವರು ಪುತ್ರ ಅನುಭವ್‌ನ ಭೇಟಿಗಾಗಿ ಮಾ.15ರಂದು ದುಬಾೖಗೆ ತೆರಳಿದ್ದರು. ಉಸಿರಾಟದ ತೊಂದರೆ ಕಾರಣ ಖನ್ನಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುತ್ರ ಅನುಭವ್‌ ಹೆತ್ತವರ ಪ್ರಯಾಣದ ವೇಳೆ ಅವರಿಗೆ ವಿಮೆ ಮಾಡಿಸಿರಲಿಲ್ಲ. ಈಗ ತೀವ್ರ ಸಂಕಷ್ಟಕ್ಕೀಡಾಗಿರುವ ಕುಟುಂಬವು ದುಬಾೖನಲ್ಲಿರುವ ಭಾರತೀಯ ಸಮುದಾಯದ ನೆರವು ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next