Advertisement

ಉಚ್ಚೆಂಗೆಮ್ಮದೇವಿ ಹುಂಡಿಯಲ್ಲಿ 16.98 ಲಕ್ಷ ರೂ. ಸಂಗ್ರಹ

07:11 AM Jan 17, 2019 | Team Udayavani |

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, 16,98,836 ರೂ. ಸಂಗ್ರಹವಾಗಿದೆ.

Advertisement

ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ಕೇವಲ 3 ತಿಂಗಳಲ್ಲಿ 16.98 ಲಕ್ಷ ರೂ. ಸಂಗ್ರಹವಾಗಿದ್ದು, ಈ ಹಿಂದೆ ಅ.26ರಂದು ಎಣಿಕೆ ಮಾಡಿದಾಗ 18.55 ಲಕ್ಷರೂ ಸಂಗ್ರಹವಾಗಿತ್ತು.

ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ಉಪ ತಹಶೀಲ್ದಾರ್‌ ಬಿ.ಫಾತಿಮಾ, ರಾಜಸ್ವ ನಿರೀಕ್ಷಕ ಶ್ರೀಧರ್‌, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಪ್ರಗತಿ ಕೃಷ್ಣ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಅರುಣ ಕುಮಾರ್‌, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆಂಚಪ್ಪ, ಗುಮಾಸ್ತ ತೆಗ್ಗಿನಮನೆ ರಮೇಶ್‌, ಕಂದಾಯ ಇಲಾಖೆ ಮಂಜುನಾಥ್‌, ಶ್ರೀಕಾಂತ್‌, ಸಮಿತಿ ಸದಸ್ಯರಾದ ಎನ್‌.ಸಿದ್ದನಗೌಡ, ಅರ್ಚಕರಾದ ಕೆಂಚಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next