Advertisement
ಮಂಗಳವಾರ ಮುಳವಾಡ ಏತ ನೀರಾವರಿ ಯೋಜನೆ-3ರ ಹಂತದ ಮಲಘಾಣ ಪಶ್ಚಿಮ ಕಾಲುವೆ ಕಾಮಗಾರಿ, ಅಕ್ವಾಡೆಕ್ಟ್ ಕಾಮಗಾರಿ, ಬಬಲೇಶ್ವರ ಶಾಖಾ ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು. ಬಳಿಕ ಮಲಘಾಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಾವರಿ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಿ ಮುಳವಾಡ ಏತ ನೀರಾವರಿ ಯೋಜನೆ 7 ಸಾವಿರ ಕೋಟಿ ರೂ. ಹಾಗೂ ತುಬಚಿ-ಬಬಲೇಶ್ವರ 3,600 ಕೋಟಿ ರೂ. ವೆಚ್ಚದ ಯೋಜನೆಗಳು ಸೇರಿದಂತೆ ನೀರಾವರಿ ನಿಗಮ ಮತ್ತು ಕೃಷ್ಣಾಭಾಗ್ಯ ಜಲನಿಗಮದಿಂದ 13,500 ಕೋಟಿ ರೂ.ಗೂ ಹೆಚ್ಚು ಹಣ ವ್ಯಯಿಸಲಾಗುತ್ತಿದೆ ಎಂದರು.
ವೈ ಜಂಕ್ಷನ್ದಿಂದ ವಿಜಯಪುರ ಮುಖ್ಯ ಕಾಲುವೆ 4ನೇ ಬಿ ಲಿಫ್ಟ್ದಿಂದ ಹಾಗೂ ಮಲಘಾಣ ಪಶ್ಚಿಮ ಕಾಲುವೆಯಿಂದ 4ನೇ ಎ ಲಿಫ್ಟ್ದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು.
Related Articles
ಕಲಗುರ್ಕಿ ಭಾಗಕ್ಕೆ ಶೀಘ್ರವೇ ನೀರು ಹರಿಸಲಾಗುತ್ತದೆ ಎಂದರು.
Advertisement
ಈ ವೇಳೆ ಸಚಿವರು ವಿವಿಧ ರೈತರ ಸಮಸ್ಯೆಗಳನ್ನು ಆಲಿಸಿ, ಕಾಲುವೆ ಜಾಲ ಮೂಲಕ ನೀರು ಸರಬರಾಜು ಸಂದರ್ಭದಲ್ಲಿ ಅವಶ್ಯಕತೆ ಇರುವ ಕಡೆ ಸಮಸ್ಯೆಗಳಿಗೆ ಸ್ಪಂದಿಸಿ ತಾತ್ಕಾಲಿಕವಾಗಿ ಕೆರೆಗಳನ್ನು ತುಂಬಿಸಲಾಗುವುದು. ವಿಶೇಷವಾಗಿ ರೈತರ ಬೇಡಿಕೆಯನ್ವಯ ಮಸೂತಿಯ 2 ಕೆರೆಗಳನ್ನುತಾತ್ಕಾಲಿಕವಾಗಿ ತುಂಬಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಈ ಕಾಲುವೆ ನಿರ್ಮಾಣ ಸಂದರ್ಭದಲ್ಲಿ ರೈತರು ನೀಡಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ, ಜಿಪಂ ಸದಸ್ಯ ಉಮೇಶ ಕೋಳಕೂರ, ಸೋಮನಾಥ ಕಳ್ಳಿಮನಿ, ಅಪ್ಪಣ್ಣ ಐಹೊಳೆ, ಆಲಮಟ್ಟಿ ಮುಖ್ಯ ಅಭಿಯಂತರ ಜಗನ್ನಾಥ ರೆಡ್ಡಿ, ಅಧೀಕ್ಷಕ ಅಭಿಯಂತರ ಎಸ್.ಎಸ್. ಮಂಜಪ್ಪ, ಬಬಲೇಶ್ವರ ಕಾರ್ಯನಿರ್ವಾಹಕ ಅಭಿಯಂತರ ಶಂಕರ ರಾಠೊಡ, ಇಇ ಪಿ.ಕೆ. ಶಂಕರ, ಎಸ್ಎಲ್ಒ ಸೋಮಲಿಂಗಪ್ಪ ಗೆಣ್ಣೂರ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ಪುನರ್ವಸತಿ ಅಧಿಕಾರಿ ಮಲ್ಲಿಕಾರ್ಜುನ ಇದ್ದರು.