Advertisement

“ಭಾರತ್‌ ಕೇ ವೀರ್‌’ನಿಧಿಗೆ 12.93 ಕೋಟಿ ರೂ. ದೇಣಿಗೆ!

12:15 PM Jan 21, 2018 | Team Udayavani |

ಹೊಸದಿಲ್ಲಿ: ಅರೆಸೇನಾ ಪಡೆಗಳ ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಥಾಪಿತವಾದ “ಭಾರತ್‌ ಕೇ ವೀರ್‌’ ನಿಧಿಯ ಆರಂಭಿಕ ಹೆಜ್ಜೆಯಾಗಿ ಸಂಗ್ರಹಿಸಲಾದ ದೇಣಿಗೆ ವೇಳೆ ಒಂದೇ ದಿನದಲ್ಲಿ 12.93 ಕೋಟಿ ರೂ. ಹರಿದುಬಂದಿದೆ!  

Advertisement

ಭಾರತ್‌ ಕೇ ವೀರ್‌ ನಿಧಿಗಾಗಿ ಧ್ಯೇಯ ಗೀತೆಯೊಂದನ್ನು ರಚಿಸಲಾಗಿದ್ದು, ಶನಿವಾರ ಅದರ ಅನಾವರಣ ಸಮಾರಂಭ ನಡೆಯಿತು. ಈ ಗೀತೆಯನ್ನು ಬಾಲಿವುಡ್‌ನ‌ ಹೆಸರಾಂತ ಗಾಯಕ ಕೈಲಾಶ್‌ ಖೇರ್‌ ಸಂಯೋಜಿಸಿ, ಹಾಡಿದ್ದಾರೆ. ಸಮಾರಂಭದಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಗೃಹ ಇಲಾಖೆಯ ರಾಜ್ಯ ಸಚಿವರಾದ ಕಿರಣ್‌ ರಿಜಿಜು, ಹನ್ಸ್‌ರಾಜ್‌ ಅಹಿರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next