Advertisement

‌Arrested: ಮನೆಗೆ ನುಗ್ಗಿ ರೌಡಿಶೀಟರ್‌ ಸತೀಶ್‌ ಕೊಲೆ ಮಾಡಿದ್ದ ನಾಲ್ವರ ಬಂಧನ 

12:55 PM Jan 28, 2024 | Team Udayavani |

ಬೆಂಗಳೂರು: ಇತ್ತೀಚೆಗೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ರೌಡಿಶೀಟರ್‌ ಸತೀಶ್‌ ಅಲಿಯಾಸ್‌ ಮಿಲಿóಯನ್ನು ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿವೇಕನಗರ ನಿವಾಸಿಗಳಾದ ಸುನೀಲ್‌ ಜೇಮ್ಸ್ ಪ್ರಶಾಂತ್‌, ಕ್ಲಾಮೇಟ್‌ ಹಾಗೂ ಧನುಷ್‌ ಬಂಧಿತರು. ಆರೋಪಿಗಳು ಜ.24ರಂದು ಸತೀಶ್‌ ಮನೆಗೆ ನುಗ್ಗಿಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

ಮಾಯಾ ಬಜಾರ್‌ ನಿವಾಸಿ ಸತೀಶ್‌ ವಿರುದ್ಧ ನಗರದ ಕೆಲ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಡಕಾಯತಿಗೆ ಸಂಚು ಸೇರಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ವಿವೇಕನಗರ ಠಾಣೆ ರೌಡಿಶೀಟರ್‌ ಆಗಿರುವ ಸತೀಶ್‌, ಕೆಲ ದಿನಗಳ ಹಿಂದೆ ಬಾರ್‌ವೊಂದಕ್ಕೆ ಹೋಗಿದ್ದ. ಅದೇ ಬಾರ್‌ಗೆ ಆರೋಪಿ ಪ್ರಶಾಂತ್‌ ಹಾಗೂ ಸ್ನೇಹಿತರು ಬಂದಿದ್ದರು. ಆಗ ಬಾರ್‌ನಲ್ಲಿ ಪ್ರಶಾಂತ್‌ ಜತೆ ಜಗಳ ತೆಗೆದಿದ್ದ ಸತೀಶ್‌, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಆ ನಂತರ ಪದೇ ಪದೆ ಸಿಕ್ಕಾಗ ಕೊಲೆ ಬೆದರಿಕೆಯೊಡ್ಡುತ್ತಿದ್ದ. ಅದರಿಂದ ಆಕ್ರೋಶಗೊಂಡಿದ್ದ ಪ್ರಶಾಂತ್‌, ಸ್ನೇಹಿತರ ಜತೆ ಸೇರಿ ಪತ್ನಿ, ಮಕ್ಕಳ ಎದುರೇ ಸತೀಶ್‌ನನ್ನು  ಕೊಲೆಗೈದು ಪರಾರಿಯಾಗಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next