Advertisement

Bangalore: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿಶೀಟರ್‌ ಹತ್ಯೆ

10:42 AM Jan 25, 2024 | Team Udayavani |

ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಲಗಿದ್ದ ರೌಡಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಪ್ರಕರಣ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಮಾಯಾ ಬಜಾರ್‌ ನಿವಾಸಿ ಸತೀಶ್‌ ಅಲಿಯಾಸ್‌ ಮಿಲಿಟರಿ ಸತೀಶ್‌ (30) ಕೊಲೆಯಾದ ರೌಡಿಶೀಟರ್‌.

ಮಂಗಳವಾರ ರಾತ್ರಿ ಊಟ ಮಾಡಿ ಮನೆ ಹಾಲ್‌ನಲ್ಲಿ ಸತೀಶ್‌ ಮಲಗಿದ್ದರು. ಇವರ ಪತ್ನಿ ಹಾಗೂ ಮಕ್ಕಳು ಬೇರೆ ರೂಮ್‌ನಲ್ಲಿ ಮಲಗಿದ್ದರು. ಮಂಗಳವಾರ ತಡರಾತ್ರಿ 2.30ರಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಇವರ ಮನೆ ಒಳಗೆ ನುಗ್ಗಿ ಸತೀಶ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಲಾಂಗ್‌ಳಿಂದ ಹೊಟ್ಟೆ, ಕೈಕಾಲು ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ಸತೀಶ್‌ ಗಂಭೀರವಾಗಿ ಗಾಯಗೊಂಡು ಚೀರಾಡಿದ್ದರು. ಇದನ್ನು ಕೇಳಿಸಿಕೊಂಡ ಪತ್ನಿ ಹಾಗೂ ಮಕ್ಕಳು ಎಚ್ಚರಗೊಂಡು ನೋಡಿದಾಗ ಸತೀಶ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಂತರ ನೆರೆಹೊರೆಯವರ ಸಹಾಯದೊಂದಿಗೆ ಸತೀಶ್‌ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸತೀಶ್‌ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದಾನೆ.

ವಿವೇಕನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ: ಕೊಲೆ ಯತ್ನ, ಡಕಾಯಿತಿಗೆ ಸಂಚು ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ವಿವೇಕನಗರ ಠಾಣೆಯಲ್ಲಿ ರೌಡಿಶೀಟರ್‌ ಪಟ್ಟಿ ತೆರೆಯಲಾಗಿತ್ತು. ಸತೀಶ್‌ ಅವರ ತಂದೆ ಮಿಲಿಟರಿಯಲ್ಲಿದ್ದರು. ಹಾಗಾಗಿ ಈತನ ಹೆಸರಿನ ಜತೆ ಮಿಲಿಟರಿ ಎಂದು ಸೇರಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಸತೀಶ್‌ ಯಾರಿಗೋ ಬೆದರಿಸಿದ ಆರೋಪ ಕೇಳಿ ಬಂದಿದೆ. ಆ ದ್ವೇಷಕ್ಕೆ ಸಂಚು ರೂಪಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next