Advertisement

Ramanagara: ಕೊಲೆಗೆ ಪ್ರತಿಕಾರ; ರೌಡಿ ಶೀಟರ್ ಬರ್ಬರ ಹತ್ಯೆ

12:27 PM May 22, 2023 | Team Udayavani |

ರಾಮನಗರ: ಬೆಂಗಳೂರಿನ ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಿ ರಾಮನಗರದಲ್ಲಿ ಮೃತದೇಹ ತಂದು ಬಿಸಾಕಿದ ಘಟನೆ ನಡೆದಿದೆ

Advertisement

ಬೆಂಗಳೂರನ ಯಲಹಂಕ ನಿವಾಸಿ ಸಂತೋಷ್ (35) ಮೃತ ರೌಡಿಶೀಟರ್. ರಾಮನಗರ ‌ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ಮೃತ ದೇಹ ಪತ್ತೆಯಾಗಿದೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕಕ್ಕೆ ಇನ್ನೂ 3-4 ಸಚಿವ ಸ್ಥಾನ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಸಂತೋಷ್ ಈ ಹಿಂದೆ ಕೊಲೆಗೈದು ಜೈಲಿನಲ್ಲಿದ್ದು ಜಾಮೀನನ ಮೇಲೆ ಹೊರ ಬಂದಿದ್ದ.  ಕೊಲೆಗೆ ಪ್ರತಿಕಾರವಾಗಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next