Advertisement

ವಿವಾದಕ್ಕೀಡಾದ ‘ಪರ್ದಾ’ಹೇಳಿಕೆ

08:39 AM May 19, 2019 | Team Udayavani |
ಮತಗಟ್ಟೆಗೆ ಮುಸುಕು (ಪರ್ದಾ) ಹಾಕಿಕೊಂಡು ಬರುವ ಮಹಿಳೆಯರು, ಮುಸುಕು ತೆಗೆದು ಮತದಾನ ಮಾಡಬೇಕು ಎಂದು ಕೇರಳದ ಸಿಪಿಎಂ ನಾಯಕ ಎಂ.ವಿ. ಜಯರಾಜನ್‌ ನೀಡಿರುವ ಹೇಳಿಕೆಯೊಂದು ವಿವಾದಕ್ಕೀಡಾಗಿದೆ. ಸಿಪಿಎಂ ಪಕ್ಷದ ಕಣ್ಣೂರು ಜಿಲ್ಲಾ ಘಟಕದ ಕಾರ್ಯದರ್ಶಿ ಜಯ ರಾಜನ್‌, ಕಣ್ಣೂರು ಜಿಲ್ಲೆಯ ಪಿಲಾಥಾರಾ ಎಂಬಲ್ಲಿ ಪ್ರಚಾರ ನಡೆಸುತ್ತಿದ್ದರು. ಆಗ, ಅವರು, ಮತದಾನಕ್ಕೆ ಬರುವವ ರೆಲ್ಲರೂ ಮತಗಟ್ಟೆಗಳಲ್ಲಿನ ಸಿಸಿಟಿವಿ ಕ್ಯಾಮೆರಾ ಗಳಿಗೆ ತಮ್ಮ ಮುಖ ಸ್ಪಷ್ಟವಾಗಿ ಕಾಣುವಂತೆ ಬರಬೇಕು. ಮುಸುಕು ಧರಿಸಿದ ಮಹಿಳೆಯರು ಮುಸುಕು ಸರಿಸಿ ಮತ ಚಲಾಯಿಸ ಬೇಕು ಎಂದಿದ್ದರು. ಇದನ್ನು ಆಕ್ಷೇಪಿಸಿರುವ ಕಾಂಗ್ರೆಸ್‌, ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರುವಂತೆ ಆಗ್ರಹಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next