Advertisement

ಖಾತೆ ಸಿಗಲಿಲ್ಲ ರೂಮ್ ಮಾತ್ರ ಸಿಗ್ತು

12:02 AM Jun 20, 2019 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ವೇಳೆ ಸಮ್ಮಿಶ್ರ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾದ ಇಬ್ಬರು ಪಕ್ಷೇತರರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಆದರೆ, ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ.

Advertisement

ಆರ್‌.ಶಂಕರ್‌ಗೆ ವಿಧಾನಸೌಧದ 237 ಹಾಗೂ 238ನೇ ಸಂಖ್ಯೆಯ ಕೊಠಡಿ ನೀಡಲಾಗಿದೆ. ಎಚ್‌.ನಾಗೇಶ್‌ಗೆ ವಿಕಾಸಸೌಧದ 133 ಹಾಗೂ 134 ನಂಬರಿನ ಕೊಠಡಿ ನೀಡಲಾಗಿದೆ. ಶಂಕರ್‌ಗೆ ಪೌರಾಡಳಿತ ಹಾಗೂ ನಾಗೇಶ್‌ಗೆ ಜವಳಿ ಖಾತೆ ನೀಡಲು ನಿರ್ಧರಿಸಲಾಗಿತ್ತಾದರೂ ನಾಗೇಶ್‌ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಬಯಸಿದ್ದರು.

ಹೀಗಾಗಿ, ಖಾತೆ ಹಂಚಿಕೆ ತಡವಾಗಿದೆ ಎನ್ನಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಈಗ ಮುಖ್ಯಮಂತ್ರಿ ಬಳಿ ಇದೆ. ಮತ್ತೂಂದು ಮೂಲಗಳ ಪ್ರಕಾರ, ಕೆಲವು ಸಚಿವರ ಖಾತೆಗಳನ್ನು ಅದಲು ಬದಲು ಮಾಡುವ ಸಾಧ್ಯತೆಯಿದೆ. ಹೀಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು. ಹೀಗಾಗಿ, ಇಬ್ಬರು ನೂತನ ಸಚಿವರಿಗೆ ಖಾತೆ ಹಂಚಿಕೆ ತಡವಾಗಿದೆ ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next