Advertisement

ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣ

06:09 AM Mar 01, 2019 | Team Udayavani |

ಬೆಂಗಳೂರು: ದಿ ಬೆಂಗಳೂರು ನಾರ್ತ್‌ ರೌಂಡ್‌ ಟೇಬಲ್‌ 25 ಮತ್ತು ಲೇಡಿಸ್‌ ಸರ್ಕಲ್‌ 14 ಪಾಲುಗಾರಿಕೆಯಲ್ಲಿ ಐಟಿಸಿ ಎಸ್ಸೆಂಟ್ರಾ ಹಾಗೂ ಗಿರಿಯಾಸ್‌ ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಾಪುರ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 3 ಕೊಠಡಿಗಳನ್ನು ಹಾಗೂ ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳನ್ನು ನಿರ್ಮಿಸಿ ದಾನವಾಗಿ ನೀಡಿದೆ.

Advertisement

ನೂತನ ಕೊಠಡಿಗಳನ್ನು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಐಟಿಸಿ ಸಿಇಒ ಸುರಜಿತ್‌ ಘೋಷ್‌ ಹಾಗೂ ಸಿಎಫ್‌ಒ ಕೊಯಲ್‌ ಮುಖರ್ಜಿ ಉದ್ಘಾಟಿಸಿದರು. 30 ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಐದು ಕೊಠಡಿಗಳ ಬಹುಪಾಲು ದೇಣಿಗೆ ಐಟಿಸಿ ಮತ್ತು ಗಿರಿಯಾಸ್‌ ನೀಡಿವೆ. ಎರಡೂ ಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೊಸ ಕೊಠಡಿಗಳಿಂದ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ರೌಂಡ್‌ ಟೇಬಲ್‌ ಇಂಡಿಯಾದ ಧ್ರುವ್‌ ದಾಲಿಯ, ಲೇಡಿಸ್‌ ಸರ್ಕಲ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ನರ್ಮತಾ ಶೆಣೈ, ಏರಿಯಾ-6 ಚೇರ್ಮನ್‌ ಧೀರಜ್‌ ಬಜಾಜ್‌, ಏರಿಯಾ-6 ಎಎಸ್‌ಟಿ ಅಂಗದ್‌ ಕೆಎಮ್‌, ಏರಿಯಾ-6 ಎವಿಸಿ ಆರತಿ ಶ್ರಫ್‌, ಥೀಮ್‌ ಪ್ರಾಜೆಕ್ಟ್ ಕನೀನರ್‌ ರೈನಾ ಭಾಟಿಯ, ಎಲ್‌ಸಿ ಚೇರ್‌ಪರ್ಸನ್‌ ಎಲ್‌ಸಿ-14 ನಿಧಿ ಸೊಮಾನಿ, ಏರಿಯಾ ಪ್ರಾಜೆಕ್ಟ್ ಕನೀನರ್‌ ಟಿಆರ್‌ ಗೋಪಾಲ್‌ ಗೆರಾ ಹಾಗೂ ಟಿಆರ್‌ ರಾಜ್‌ ಕಿರಣ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next