Advertisement

ಲೆಕ್ಕಾಧಿಕಾರಿ ವಿರುದ್ಧ ಜನರ ಪ್ರತಿಭಟನೆ

05:05 PM Aug 24, 2019 | Team Udayavani |

ರೋಣ: ನವಿಲು ತೀರ್ಥ ಜಲಾಶಯದ ನೀರು ಹಾಗೂ ಬೆಣ್ಣಿಹಳ್ಳದ ಪ್ರವಾಹಕ್ಕೆ ಯಾ.ಸ. ಹಡಗಲಿ ಗ್ರಾಮ ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಶುಕ್ರುವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಗ್ರಾಪಂ ಸದಸ್ಯ ಹನುಮಂತ ಹನುಮಕ್ಕನವರ ಮಾತನಾಡಿ, ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಮನೆ ಹಾಗೂ ಬೆಳೆಗಳು ಸೇರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳು ನಾಶವಾಗಿವೆ. ಆದರೆ ಪ್ರವಾಹದಲ್ಲಿ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮಾಡದೇ ತಮಗೆ ಬೇಕಾದವರಿಗೆ ಗ್ರಾಮ ಲೆಕ್ಕಾಧಿಕಾರಿ ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ ಪರಿಹಾರವನ್ನು ಗ್ರಾಮದ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಹಾನಿಗೆ ತಕಷ್ಟು ನೀಡದೇ ಯಾವುದೋ ಒಂದು ಊರಲ್ಲಿ ಕುಳಿತು ಬೇಕಾದವರನ್ನು ಅಲ್ಲಿಯೇ ಕರೆಯಿಸಿ ಪರಿಹಾರ ಚೆಕ್‌ ವಿತರಣೆ ಮಾಡುತ್ತಿದ್ದಾರೆ.

ಇದಲ್ಲದೇ ನೆರೆಯ ಸಮಯದಯಲ್ಲಿ ನಾಲ್ಕು ದಿನಗಳ ಕಾಲ ಗಂಜಿಕೇಂದ್ರ ಪ್ರಾರಂಭ ಮಾಡಿ, ಈಗ 10 ದಿನಗಳ ಕಾಲ ನಡೆಸಿದ್ದೇನೆ ಎಂದು ಬೋಗಸ್‌ ಬಿಲ್ ತಗೆಯಲು ಸಜ್ಜಾಗಿದ್ದಾರೆ. ಇದರ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಬಸವರಾಜ ಆಲೂರ, ಕಲ್ಲಪ್ಪ ಕಡಕೋಳ, ಬಸವರಾಜ ಯಲಿಗಾರ, ಶರಣಪ್ಪ ವಾಸನದ, ಶೇಖಪ್ಪ ವಾಸನದ, ವಿರೂಪಾಕ್ಷಪ್ಪ ಚಳಗೇರಿ, ಶಿವನಗೌಡ ವಾಸನದ, ಶಿವಾನಂದ ಹನಮಕ್ಕನವರ, ರಾಜು ಪಾಟೀಲ, ಫಕೀರಗೌಡ ಪಾಟೀಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next