Advertisement

ತ್ರಿಕೋನ ಸರಣಿ: ಕೊಹ್ಲಿ, ಧೋನಿಗೆ ವಿಶ್ರಾಂತಿ? ರೋಹಿತ್‌ಗೆ ನಾಯಕತ್ವ

06:30 AM Feb 25, 2018 | |

ನವದೆಹಲಿ: ಶ್ರೀಲಂಕಾ ಆತಿಥ್ಯದ ತ್ರಿಕೋನ ಸರಣಿಗೆ ಭಾರತದ ಅಗ್ರ ಆಟಗಾರರಾದ ನಾಯಕ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

Advertisement

ಹೀಗೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಸುದೀರ್ಘ‌ ಆಫ್ರಿಕಾ ಸರಣಿಯಿಂದಾಗಿ ಭಾರತ ಆಟಗಾರರು ಸುಸ್ತಾಗಿದ್ದಾರೆ. ಹೀಗಾಗಿ ಇವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ರೋಹಿತ್‌ ಶರ್ಮ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಮಾರ್ಚ್‌ನಲ್ಲಿ ತ್ರಿಕೋನ ಸರಣಿ ನಡೆಯಲಿದ್ದು ಆತಿಥೇಯ ಲಂಕಾ, ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಪಾಲ್ಗೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next