Advertisement

ಭೂಗಳ್ಳರಿಂದ ಬೃಹತ್‌ ಕಲ್ಲುಬಂಡೆ ಧ್ವಂಸ

11:08 PM May 22, 2021 | Team Udayavani |

ಗಂಗಾವತಿ: ಭೂಗಳ್ಳರು ಬೃಹತ್‌ ಗಾತ್ರದ ಕಲ್ಲುಬಂಡೆ ಒಡೆದು ಅಲ್ಲಿ ವಾಸಿಸಲು ಜಾಗ ಮಾಡಿಕೊಳ್ಳುವ ಸಂಚು ನಡೆಸಿದ ಘಟನೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ತಾಲೂಕಿನ ಚಿಕ್ಕರಾಂಪುರ ಕ್ರಾಸ್‌ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ನಡೆದಿದೆ.

Advertisement

ಚಿಕ್ಕರಾಂಪುರ ಕ್ರಾಸ್‌ ಗ್ರಾಮ ಹಂಪಿ ಅಭಿವೃದ್ಧಿ ಪ್ರಾಧಿ ಕಾರದ ವ್ಯಾಪ್ತಿಯಲ್ಲಿದ್ದರೂ ಇಲ್ಲಿ ನಿರಂತರ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅಪರೂಪವಾದ ಕಲ್ಲು ಬಂಡೆಗಳು ಮತ್ತು ಗುಹಾಂತರ ಚಿತ್ರಗಳಿದ್ದರೂ ಸ್ಥಳೀಯ ಕೆಲವರು ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿ ಕಲ್ಲು ಒಡೆದು ವಾಸಿಸಲು ಜಾಗ ಮಾಡಿಕೊಳ್ಳುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಸೇರಿ ಸುತ್ತಲಿನ ಏಳುಗುಡ್ಡ ಪ್ರದೇಶದಲ್ಲಿ ಅಪರೂಪದ ಜೀವಿ ಸಂಕುಲವಿದ್ದು ಅವುಗಳನ್ನು ರಕ್ಷಿಸಲು ಸರ್ಕಾರ ಈ ಪ್ರದೇಶ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿದೆ.

ಅರಣ್ಯ ಇಲಾಖೆಯವರು ಸಣ್ಣಪುಟ್ಟ ಮಣ್ಣು ಮರಂ ಸಾಗಿಸುವವರನ್ನು ಮತ್ತು ಜೀವನೋಪಾಯಕ್ಕಾಗಿ ಹೋಟೆಲ್‌ ನಡೆಸುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತಾರೆ. ಆದರೆ ಬೃಹತ್‌ ಕಲ್ಲು ಬಂಡೆ ಒಡೆದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next