Advertisement

ಬಂಡೀಮಠ ಚರಂಡಿ ದುರಸ್ತಿ: ಚಪ್ಪಡಿ ಅಳವಡಿಕೆ

10:32 AM Jul 17, 2019 | sudhir |

ಕಾರ್ಕಳ : ಪುರಸಭಾ ವ್ಯಾಪ್ತಿಯ 5ನೇ ವಾರ್ಡ್‌ ಬಂಡೀಮಠ ಎಸ್‌ಟಿ ಕಾಲನಿ ಸಮೀಪದ ಚರಂಡಿಗೆ ಚಪ್ಪಡಿ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಪುರಸಭೆಯ ಮೀಸಲು ನಿಧಿ 1.5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಪುರಸಭಾ ಎಂಜಿನಿಯರ್‌ ತಿಳಿಸಿದರು.

Advertisement

ಕಲ್ಲೊಟ್ಟೆ ಪರಿಸರದ ಈ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಸರಾಗವಾಗಿ ನೀರು ಹರಿಯುತ್ತಿರಲಿಲ್ಲ. ಸಾರ್ವಜನಿಕರಿಗೆ ದುರ್ನಾತ ಬೀರುವು ದರೊಂದಿಗೆ ಸೊಳ್ಳೆ ಉತ್ಪತ್ತಿ ತಾಣವಾಗಿಯೂ ಮಾರ್ಪಾಡಾಗಿತ್ತು. ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಸ್ಥಳೀಯರಲ್ಲಿ ಆವರಿಸಿತ್ತು. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿ, ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.
ಇದೀಗ ಚರಂಡಿ ಹೂಳು, ತ್ಯಾಜ್ಯ ತೆಗೆದು ಚಪ್ಪಡಿ ಅಳವಡಿಸಿರುವುದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next