Advertisement

ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ

04:49 PM Jul 14, 2021 | Team Udayavani |

ಗುಂಡ್ಲುಪೇಟೆ: ಕೇರಳದ ಚಿಪ್ಸ್‌ ವ್ಯಾಪಾರಿಯನ್ನು ಅಪಹರಿಸಿ ಹಣ ಕಿತ್ತುಕೊಂಡು ದರೋಡೆ ಮಾಡಿರುವ ಘಟನೆ ತಾಲೂಕಿನ ಬೇಗೂರು ಸಮೀಪದ ಕೋಟೆ ಕೆರೆ ರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

Advertisement

ಕೇರಳ ಮೂಲದ ಹರ್ಷದ ಅಲಿ ಹಣ ಕಳೆದುಕೊಂಡ ವ್ಯಾಪಾರಿ. ಇವರು ಕೋಟೆಕೆರೆ ಸಮೀಪ ಚಿಪ್ಸ್‌ ಕಾರ್ಖಾನೆ ನಡೆಸುತ್ತಿದ್ದು, ಎಂದಿ ನಂತೆ ತನ್ನ ವ್ಯಾಪಾರ ಮುಗಿಸಿಕೊಂಡು ಕೋಟೆಕೆರೆಗೆ ಹಿಂತಿರುಗುವಾಗ ಮೂರು ಕಾರಿನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿ ಗಳು, ಇನೋವಾ ಕಾರಿನ ಮೇಲೆ ರಾಡಿನಿಂದ ದಾಂಧಲೆ ನಡೆಸಿ ಕಾರಿನಲ್ಲಿದ್ದ ಹರ್ಷದ್‌ ಅಲಿ ಹಾಗೂ ಸ್ನೇಹಿತ ಚಿನ್ನಸ್ವಾಮಿ ಅವರಿಗೆ ಖಾರದ ಪುಡಿ ಎರಚಿ ಇಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈವೇಳೆ ಕಾರಿನ ಡ್ಯಾಶ್‌ ಬೋರ್ಡಿನಲ್ಲಿಟ್ಟಿದ್ದ 15 ಸಾವಿರ ರೂ.ಲಪಟಾಯಿಸಿ ಕಾರು ಹಾಗೂ ಮಾಲೀಕನನ್ನು ಬಿಟ್ಟು ಮುಸುಕುದಾರಿ ದರೋಡೆಕೋರರು ಪರಾರಿಯಾಗಿದ್ದಾರೆ.

ದರೋಡೆಕೋರರು ಮಲಯಾಳಂ ಭಾಷೆ ಮಾತನಾಡಿದ್ದು, ಕೇರಳದವರಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖ ಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ‌ ದಿವ್ಯ ಸಾರಾ ಥಾಮಸ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next