Advertisement

Businessman House ದರೋಡೆ ಪ್ರಕರಣ: ಮುಂದುವರಿದ ತನಿಖೆ; ಕೃತ್ಯದಲ್ಲಿ ಹೊರರಾಜ್ಯದ ತಂಡ ಭಾಗಿ?

11:54 PM Jun 28, 2024 | Team Udayavani |

ಮಂಗಳೂರು: ನಗರದ ಹೊರವಲಯದ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಅವರ ಮನೆಯಲ್ಲಿ ದರೋಡೆ ನಡೆಸಿದವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

Advertisement

ದೊರೆತಿರುವ ಮಹತ್ವದ ಸುಳಿವು ಆಧರಿಸಿ ತನಿಖೆ ಮುಂದುವರಿದಿದೆ. ದರೋಡೆಕೋರರು ಬಳಸಿದ ಕಾರು ಸಾಗಿರುವ ರಸ್ತೆಯ ಸಿಸಿ ಕೆಮರಾ ದೃಶ್ಯಗಳ ಪರಿಶೀಲನೆಯೂ ನಡೆದಿದೆ. ಕೃತ್ಯದಲ್ಲಿ ಕನಿಷ್ಠ 9ರಿಂದ 10 ಮಂದಿ ಭಾಗಿಯಾಗಿದ್ದರೂ ಪ್ರಕರಣ ಭೇದಿಸುವುದು ಪೊಲೀಸರಿಗೆ ಸಾಧ್ಯವಾಗಿಲ್ಲ.

ಘಟನೆ ನಡೆದು ವಾರ ಪೂರ್ಣಗೊಂಡರೂ ಆರೋಪಿಗಳ ಬಗ್ಗೆ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಗದಿರುವುದು ಸಾರ್ವಜನಿಕ ವಲಯದಲ್ಲಿಯೂ ಅಚ್ಚರಿ ಮೂಡಿಸಿದೆ. ಇದೊಂದು ವೃತ್ತಿಪರ ತಂಡದ ಯೋಜಿತ ಕೃತ್ಯವೇ, ಹೊರರಾಜ್ಯದ ತಂಡ ಭಾಗಿಯಾಗಿದೆಯೇ ಎಂಬ ಶಂಕೆಯೂ ಬಲವಾಗಿದೆ. ದರೋಡೆಕೋರರ ಮಾತಿನ ಶೈಲಿ ಸ್ಥಳೀಯರಂತೆಯೇ ಇತ್ತು ಎಂದು ಪೊಲೀಸರಿಗೆ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಇದರಲ್ಲಿ ಸ್ಥಳೀಯ ಪರಿಚಿತರ ಮುಖ್ಯ ಪಾತ್ರವಿರುವ ಬಗ್ಗೆ ಸಂದೇಹಗಳು ಉಂಟಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next