Advertisement

Missing Case: ಮನೆಬಿಟ್ಟು ಹೋದಾತ ನಾಪತ್ತೆ; ದೂರು ದಾಖಲು

07:11 PM Jun 27, 2024 | Team Udayavani |

ಕೊಲ್ಲೂರು: ಕೊಲ್ಲೂರು ನಿವಾಸಿ ಮೋಹನ್‌ ರಾಮ್‌ ಹೆಗ್ಡೆ (56) ಅವರು ಎ. 1ರಂದು ಇಲ್ಲಿನ ಶ್ರೀ ಮೂಕಾಂಬಿಕ ದೇಗುಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ಮನೆಗೆ ಬಂದಿಲ್ಲ. ಆ ಬಳಿಕ ಸಂಬಂಧಿಕರ ಮನೆ ಹಾಗೂ ಊರಿನ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಅವರ ತಂದೆ ವಿಶ್ವೇಶ್ವರ ಹೆಗ್ಡೆ ಅವರು ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ.

Advertisement

ಕಳೆದ 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಈ ಹಿಂದೆಯೂ ಮನೆಬಿಟ್ಟು ಹೋಗಿ ಹಲವು ಸಮಯ ಬಾರದೆ ಮತ್ತೆ ಮನೆಗೆ ಬರುತ್ತಿದ್ದರು. ಹಾಗಾಗಿ ಎ. 1ರಂದು ನಾಪತ್ತೆಯಾಗಿದ್ದ ಅವರು ಮರಳಿ ಬರಬಹುದೆಂದು ನಿರೀಕ್ಷಿಸಲಾಗಿತ್ತು. 5.5 ಅಡಿ ಎತ್ತರದ ಸಾಧಾರಣ ಶರೀರ ಹೊಂದಿದ್ದು, ಪಂಚೆ ಹಾಗೂ ಶರ್ಟ್‌ ಧರಿಸಿದ್ದರು. ಕನ್ನಡ, ಮಲೆಯಾಳಂ, ತಮಿಳು ಭಾಷೆ ಮಾತನಾಡುತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next