Advertisement

ಕುರುವಳ್ಳಿಯಲ್ಲಿ ಹಾಡು ಹಗಲೇ ಕಾರಿನಲ್ಲಿ ಬಂದು 2.50 ಲಕ್ಷ ಹಣ ದೋಚಿದ ಖದೀಮರು!

05:21 PM Feb 22, 2024 | sudhir |

ತೀರ್ಥಹಳ್ಳಿ : ಪಟ್ಟಣದ ಸಮೀಪದ ಕುರುವಳ್ಳಿಯ ಅಡಿಕೆ ವ್ಯಾಪಾರ ಅಂಗಡಿವೊಂದರಲ್ಲಿ ಹಾಡು ಹಗಲೇ ಕಳ್ಳತನ ನಡೆದಿರುವ ಘಟನೆ ನಡೆದಿದೆ.

Advertisement

ಕುರುವಳ್ಳಿಯ ಗಣೇಶ್ ಟ್ರೇಡರ್ಸ್ ಒಂದರಲ್ಲಿ ಬೆಳಿಗ್ಗೆ 11: 30 ರ ಸಮಯದಲ್ಲಿ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ 2.50 ಲಕ್ಷ ಹಣವನ್ನು ಕ್ಯಾಶ್ ಡ್ರಾವರ್ ಅನ್ನು ರಾಡ್ ನಿಂದ ಕಟ್ ಮಾಡಿ ಇಬ್ಬರು ಕಳ್ಳರು ಬಂದು ಕದ್ದೋಯ್ದಿದ್ದಾರೆ. ಆಲ್ಟೊ ಕಾರಿನಲ್ಲಿ ಬಂದಿದ್ದ ಇಬ್ಬರು ಈ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಹಾಡು ಹಗಲೇ ಅತೀ ಹೆಚ್ಚು ಜನ ಓಡಾಡುವ ಸ್ಥಳದಲ್ಲಿ ಈ ರೀತಿ ನಡೆದಿರುವುದು ಆಶ್ಚರ್ಯ ಮೂಡಿಸಿದೆ. ಕಾರು ಓಡಾಟ ನಡೆಸಿರುವುದು ಪಕ್ಕದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌… ಅಪಾರ ಪ್ರಮಾಣದ ಕಬ್ಬು ಸುಟ್ಟು ಭಸ್ಮ, ಕಂಗಾಲಾದ ರೈತ

Advertisement

Udayavani is now on Telegram. Click here to join our channel and stay updated with the latest news.

Next