Advertisement

ರಸ್ತೆ ತೆರವುಗೊಳಿಸದ ಗ್ರಾಪಂ: ಸಾರ್ವಜನಿಕರ ಆಕ್ರೋಶ

01:01 PM Jun 24, 2019 | Suhan S |

ಜೋಯಿಡಾ: ತಾಲೂಕಿನ ನಗರಿ ಗ್ರಾಮದ ಮುಖ್ಯ ರಸ್ಥೆ ಮೇಲೆ ಕಳೆದೊಂದು ವಾರದಿಂದ ಮರ ಮುರಿದು ಬಿದ್ದಿದ್ದರೂ ಯಾರೂ ಇದನ್ನು ತೆರವುಗೊಳಿಸಲು ಮುಂದಾಗದೇ ಹಾಗೇ ಉಳಿದಿದೆ.

Advertisement

ಗ್ರಾ.ಪಂ. ಸದಸ್ಯರೊಬ್ಬರು ನಗರಿ ಗ್ರಾಮದವರಾಗಿದ್ದು, ಅವರದೇ ಪೆಸೆಂಜರ ಜೀಪ್‌ ಈ ಮಾರ್ಗದಿಂದ ದಿನನಿತ್ಯ ಓಡಾಡಿಕೊಂಡಿದ್ದರೂ ಈ ಗಿಡವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಿಸಲಿಲ್ಲ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಈ ಮರವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಿಸದಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರಿ ರಸ್ತೆಯಲ್ಲಿ ಬಿದ್ದ ಮರವನ್ನು ಅರಣ್ಯ ಇಲಾಖೆ ಅಥವಾ ಗ್ರಾಪಂ ತೆರವುಗೊಳಿಸುವ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಗಣೇಶ ಹೆಗಡೆ, ವಿಶ್ವ ನಾಯ್ಕ, ಇತರರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next