Advertisement

Road Mishap; ಬೈಕ್‌ಗೆ ಕಾರು ಢಿಕ್ಕಿ: ಕೆಐಒಸಿಎಲ್‌ ಉದ್ಯೋಗಿ ಸಾವು

09:52 PM Jan 17, 2024 | Team Udayavani |

ಮಂಗಳೂರು/ಸುರತ್ಕಲ್‌: ಕಾವೂರು ಜಂಕ್ಷನ್‌ನ ಕೆಐಒಸಿಎಲ್‌ ಕ್ವಾಟ್ರìಸ್‌ ಮುಖ್ಯಗೇಟಿನ ಎದುರು ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಕೆಐಒಸಿಎಲ್‌ ಉದ್ಯೋಗಿ, ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತಪಟ್ಟಿದ್ದಾರೆ.

Advertisement

ಶೇಖರಪ್ಪ ಅವರು ಕರ್ತವ್ಯ ಮುಗಿಸಿ ಕ್ವಾಟ್ರìಸ್‌ ಕಡೆಗೆ ಬರಲು ಮುಖ್ಯಗೇಟಿನ ಎದುರು ಇರುವ ಡಿವೈಡರ್‌ ಬಳಿ ಬಲಕ್ಕೆ ತಿರುಗಲು ಇಂಡಿಕೇಟರ್‌ ಹಾಕಿಕೊಂಡು ನಿಂತಿದ್ದಾಗ ರಾತ್ರಿ ಸುಮಾರು 11.25ಕ್ಕೆ ಬೋಂದೆಲ್‌ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡ ಶೇಖರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರ ನಿಧನಕ್ಕೆ ಇಂಟಕ್‌ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್‌ ಮಲ್ಲಿ, ದ.ಕ. ಜಿಲ್ಲಾಧ್ಯಕ್ಷ ಮನೋಹರ್‌ ಶೆಟ್ಟಿ ಅವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next