Advertisement

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

07:40 PM Sep 12, 2024 | Team Udayavani |

ರಬಕವಿ ಬನಹಟ್ಟಿ: ಹೊಸೂರ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ(ಸೆ.12) ಮಧ್ಯಾಹ್ನ 01 ಗಂಟೆಯ ಸುಮಾರಿಗೆ ನಡೆದಿದೆ.

Advertisement

ವೇಗವಾಗಿ ಬಂದ ಬೈಕೊಂದು ಸ್ಕಿಡ್‌ ಆಗಿ ರಬಕವಿ ಕಡೆಯಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಮುಧೋಳ ತಾಲೂಕಿನ ಕುಳಲಿ ಗ್ರಾಮದ ಮಲ್ಲಿಕಾರ್ಜುನ ಗಂಗಪ್ಪ ಗಣಿ (22) ಎಂದು ತಿಳಿದು ಬಂದಿದ್ದು ಅವನ ಜೊತೆ ಇದ್ದ ರಮೇಶ ಪಟೇದ (18) ಕಲ್ಮೇಶ ಅಥಣಿ (20) ಇಬ್ಬರಿಗೂ ಗಾಯಗಳಾಗಿವೆ.

ಈ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next