Advertisement

Pavagada: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

05:42 PM Aug 17, 2024 | Team Udayavani |

ಪಾವಗಡ: ತಾಲೂಕಿನ ನಿಡಗಲ್ ಹೋಬಳಿ ಕರೆಕ್ಯಾತನಹಳ್ಳಿ ಸ್ವಾರಮ್ಮ ದೇವಸ್ಥಾನ ಸಮೀಪ ಶಿರಾ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

Advertisement

ತಾಲೂಕಿನ ಅರಸೀಕೆರೆ ಗ್ರಾಮದ ತಿಮ್ಮಣ್ಣಮಗ‌ಕುಮಾರ್(28)ಮೃತ‌ ಯುವಕ.

ಶ್ರಾವಣ ಎರಡನೇ ಶನಿವಾರ ಪಾವಗಡ‌ಪಟ್ಟಣದ ದೇವರ ದರ್ಶನ ಪಡೆದು ತಮ್ಮ ಊರಿಗೆ ಬೈಕ್ ನಲ್ಲಿ ಹೋಗುವಾಗ ಟಯರ್ ಪಂಕ್ಚರ್ ಅಗಿ ವಾಹನ ಸಮೇತ ‌ರಸ್ತೆ‌ ಮೇಲೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನ ಬೈಕ್ ಸವಾರನ ತಲೆ ಮೇಲೆ ಹಾದು ಹೋಗಿದ್ದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅರಸೀಕೆರೆ‌ ಪೋಲಿಸ್ ಠಾಣೆಯ ಸಬ್ಇನ್ಸೆಪೆಕ್ಟರ್ ಸ್ಥಳ ಕ್ಕೆ ‌ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹಿಂದೆ ಬಿಎಸ್‌ ವೈ ಬಗ್ಗೆ ಏನು ಹೇಳಿದ್ದರೆಂದು ನೆನಪು ಮಾಡಿಕೊಳ್ಳಲಿ: ಜಾರಕಿಹೊಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next