Advertisement

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ, ಇಬ್ಬರು ಸಾವು, ಮೂವರು ಗಂಭೀರ

07:52 PM May 14, 2021 | Team Udayavani |

ಚಿತ್ರದುರ್ಗ : ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಮತ್ತು ಟ್ರ್ಯಾಕ್ಟರ್ ಗೆ ಲಾರಿಯೊಂದು ಡಿಕ್ಕಿಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ನಗರ ಬಳಿ ರಾ.ಹೆ 4ರಲ್ಲಿ ಶುಕ್ರವಾರ ಸಂಭವಿಸಿದೆ.

Advertisement

ಟ್ರ್ಯಾಕ್ಟರ್ ನಲ್ಲಿದ್ದ ಆಯಿತೋಳ್ ಗ್ರಾಮದ ಕರಿಯಪ್ಪ ತಂದೆ ಭೈರಪ್ಪ(37) ಮತ್ತು ಕರಿಯಪ್ಪ ತಂದೆ ಮಾರಪ್ಪ(38) ಮೃತರು. ಇವರು ರಾ.ಹೆ ಕಾಮಗಾರಿ ನಿರ್ವಹಿಸುತ್ತಿರುವ ಪಿಎನ್ ಸಿ ಕಂಪನಿಯ ಕಾರ್ಮಿಕರು ಎನ್ನಲಾಗಿದೆ.

ಮೂವರು ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಕುರಿತು ಚಿತ್ರದುರ್ಗ ನಗರ ಸಂಚಾರಿ ಠಾಣೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಕೋವಿಶೀಲ್ಡ್ 2ನೇ ಡೋಸ್ ವ್ಯಾಕ್ಸಿನೇಷನ್ ಮಧ್ಯಂತರ ಅವಧಿ ಪರಿಷ್ಕರಣೆ  

Advertisement
Advertisement

Udayavani is now on Telegram. Click here to join our channel and stay updated with the latest news.

Next