Advertisement

ಕಲಬುರಗಿಯಲ್ಲಿ ರಸ್ತೆ ಒತ್ತುವರಿ ಕಾರ್ಯಾಚರಣೆ: ಮಾತಿನ ಚಕಮಕಿ

02:48 PM May 19, 2022 | Team Udayavani |

ಕಲಬುರಗಿ: ನಗರದಲ್ಲಿ ಇತ್ತೀಚೆಗೆ ರಸ್ತೆ, ಫುಟಪಾತ್ ಅತಿಕ್ರಮಣ ಹಾಗೂ ಒತ್ತುವರಿ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಪಾಲಿಕೆ ಅಧಿಕಾರಿಗಳು ಈಗ ತೆರವಿಗೆ ಮುಂದಾಗಿದ್ದಾರೆ.

Advertisement

ನಗರದ ರಾಮಮಂದಿರ ವೃತ್ತದ ಬಳಿ ರಸ್ತೆ ಅತಿಕ್ರಮಿಸಿದ್ದ ಗೂಡಂಗಡಿಗಳನ್ನು ಬುಲ್ಡೋಜರ್‌ದಿಂದ ತೆರವುಗೊಳಿಸಲಾಯಿತು.

ಈ ಮೊದಲು ನೊಟೀಸ್ ನೀಡಿ ತೆರವುಗೊಳಿಸಲಾಗಿದ್ದರೂ ಮತ್ತೆ ಗೂಡಂಗಡಿ ಹಾಕಿದ್ದರಿಂದ ಪಾಲಿಕೆ ಅಧಿಕಾರಿಗಳು ಪೊಲೀಸ್ ಸಮ್ಮುಖದಲ್ಲಿ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರಿಗಳು ಇನ್ನೊಂದಿಷ್ಟು ಸಮಯ ಕೊಡಬೇಕಿತ್ತು ಎಂದು ಹೇಳಿದರು.

ಈ ಹಿಂದೆ ತೆರವುಗೊಳಿಸಲಾಗಿ ಮತ್ತೆ ಒಳಚರಂಡಿ ಹಾಗೂ ರಸ್ತೆ ಮೇಲೆ ಗೂಡಂಗಡಿ ಹಾಕಿರುವುದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಮಯ ನೀಡುವ ಪ್ರಮೆಯ ಎದುರಾಗುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.

Advertisement

ಕಾರ್ಯಾಚರಣೆ ಮುಂದುವರಿಕೆ: ರಾಮ ಮಂದಿರವಲ್ಲದೇ ಇತರ ರಸ್ತೆಗಳಲ್ಲೂ ರಸ್ತೆ ಹಾಗೂ ಒಳಚರಂಡಿ ಅತಿಕ್ರಮಣ ಆಗಿರುವ ತೆರವು ಕಾರ್ಯಾಚರಣೆ ಪಾಲಿಕೆ ಆಯುಕ್ತರ ನಿರ್ದೇಶನ ಮೇರೆಗೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಇಂಜಿನಿಯರುಗಳಾದ ಸುಧೀರ ಮೇತ್ರೆ ಹಾಗೂ ಪ್ರಭಾಕರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next