Advertisement

100 ಕೋಟಿ ರೂ.ನಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿ

12:41 PM Feb 27, 2023 | Team Udayavani |

ಚಿಂತಾಮಣಿ: ಕ್ಷೇತ್ರದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ, ಮಾಜಿ ಶಾಸಕರು ಏನೂ ಅಭಿವೃದ್ಧಿ ಆಗಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.

Advertisement

ನಗರ ಹೊರವಲಯದ ಜೆ.ಕೆ.ಭವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಚಿಂತಾಮಣಿ ಕ್ಷೇತ್ರಕ್ಕೆ 100 ಕೋಟಿ ರೂ. ವಿಶೇಷ ಅನುದಾನ ತಂದು, ರಸ್ತೆ ಅಭಿವೃದ್ಧಿ ಪಡಿಸ ಲಾಗಿ ದೆ. ಸಚಿವ ಸೋಮಣ್ಣ ಬಳಿ ಮನವಿ ಮಾಡಿ, 1,100 ಮನೆ ಮಂಜೂರು ಮಾಡಿಸಿ ಗ್ರಾಪಂ ಮೂಲಕ ಬಡವ ರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ರಾಪಂ ಮಟ್ಟದಲ್ಲಿ ಪ್ರವಾಸ: ವಿಧಾನಸಭೆ ಚುನಾವಣೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು, ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಚುನಾವಣೆ ಎದುರಿಸಲು ಸಜ್ಜಾಗಬೇಕು, ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಮಾ.1ರಿಂದ 18ರ ತನಕ ಕ್ಷೇತ್ರದಲ್ಲಿನ ಎಲ್ಲಾ ಗ್ರಾಪಂ ಮಟ್ಟದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

100 ಕೋಟಿ ರೂ. ಅನುದಾನ: ತಾನೂ ತಮ್ಮೆಲ್ಲರ ಆಶೀರ್ವಾದದಿಂದ ಎರಡು ಬಾರಿ ಶಾಸಕನಾಗಿ, ಕ್ಷೇತ್ರದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯ ಮಾಡಿರುವುದಲ್ಲದೇ, ಎಲ್ಲಾ ಸಮಾಜದವರನ್ನು ಸಮಾನತೆಯಿಂದ ಕಂಡು, ಕ್ಷೇತ್ರದಲ್ಲಿ ಶಾಂತಿ ವಾತಾವರಣ ನಿರ್ಮಾಣ ಮಾಡಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ತಂದು, ತಾವು ತಮ್ಮ ಕುಟುಂಬದವರು 60 ವರ್ಷದಿಂದ ಅಭಿವೃದ್ಧಿ ಮಾಡದ ರಸ್ತೆಗಳನ್ನೆಲ್ಲ ಅಭಿವೃದ್ಧಿಪಡಿಸಿದ್ದೇನೆ ಎಂದು ಸುಧಾಕರ್‌ಗೆ ಸ್ಪಷ್ಟನೆ ನೀಡಿದರು.

ಹ್ಯಾಟ್ರಿಕ್‌ ಗೆಲುವು: ಮಾಜಿ ಶಾಸಕರು ಕಣ್ಣಿಗೆ ಕಾಣದೇ ಹಾಗೆ, ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಆಗಿಲ್ಲ ಎಂದು ಹಳೇ ಕ್ಯಾಸೆಂಟನ್ನೇ ರಿಪ್ಲೇ ಮಾಡುವುದರ ಮೂಲಕ ಆಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಮುಂದಿನ 2 ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ನನ್ನ ಅಭಿವೃದ್ಧಿ ಕೆಲಸಗಳನ್ನು ಜನತೆ ಮೆಚ್ಚಿ 10 ರಿಂದ 15 ಸಾವಿರ ಮತಗಳ ಅಂತರದಿಂದ ಮೂರನೇ ಬಾರಿಗೆ ಗೆಲ್ಲಿಸಲಿದ್ದಾರೆ ಎಂದು ಮಾಜಿ ಶಾಸಕರಿಗೆ ಸವಾಲು ಎಸೆದರು.

Advertisement

ಚಿಂತಾಮಣಿ ನಗರ ಭಾಗದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಭಕ್ತರಹಳ್ಳಿ ಆರಸೀಕೆರೆ ನೀರನ್ನು ತರಲು ಹೋದರೆ, ಅದಕ್ಕೆ ತಮ್ಮ ಚೇಲಾಗಳಿಂದ ಅಡ್ಡಿಪಡಿಸಿ, ಕೋರ್ಟ್‌ಗೆ ಹೋಗಿದ್ದೀರಿ. ಆದರೆ, ಕೋರ್ಟ್‌ ಕಾಮಗಾರಿಗೆ ಅಡ್ಡಿಪಡಿಸದಂತೆ ಆದೇಶ ಮಾಡಿದೆ. ತಾವು ಮತ್ತು ತಮ್ಮ ಕುಟುಂಬದವರು 60 ವರ್ಷಗಳಿಂದ ಮಾಡದೇ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ನನ್ನ ಒಂದು ಕೋಟಿ ರೂ. ವಿಶೇಷ ಅನುದಾನದ ಜೊತೆಗೆ 5 ಕೋಟಿ ರೂ.ನಲ್ಲಿ ನಿರ್ಮಾಣ ಮಾಡಲಾಗಿದ್ದು, ಶೀಘ್ರ ಉದ್ಘಾಟನೆ ಮಾಡಿ, ಸೇವೆಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಒಕ್ಕಲಿಗ ಸಮುದಾಯಕ್ಕೆ ನಗರ ಭಾಗದಲ್ಲಿ ಮೀಸಲಿಟ್ಟಿದ್ದ ಜಾಗವನ್ನು ಮತ್ತೆ ಒಕ್ಕಲಿಗ ಸಮುದಾಯಕ್ಕೆ ವಾಪಸ್‌ ಕೋಡಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next