Advertisement

ಗುಡ್ಡ ಜರಿದು ಬದಿಯಡ್ಕ –ಪೆರ್ಲ ರಸ್ತೆ ಸಂಚಾರ ಬಂದ್

08:38 AM Aug 12, 2019 | sudhir |

ಬದಿಯಡ್ಕ :ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ರಸ್ತೆ ಬದಿಯಡ್ಕ ಪೆರ್ಲ ರಸ್ತೆಯ ಮಧ್ಯ ಭಾಗದಲ್ಲಿರುವ ಕರಿಂಬಿಲ ಎಂಬಲ್ಲಿ ಗುಡ್ಡ ಜರಿದು ರಸ್ತೆ ಸಂಚಾರ ಸ್ಥಗಿತವಾಗಿದೆ.

Advertisement

ಲೋಕ ಉಪಯೋಗಿ ಇಲಾಖೆ ಆದೇಶದಂತೆ ಬದಿಯಡ್ಕ ಪೊಲೀಸರು ರಸ್ತೆಗೆ ತಡೆಯೋದಿದ್ದು ಇದರಿಂದ ಕೇರಳ ಕರ್ನಾಟಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬೇರೆ ದಾರಿ ಬಳಸಬೇಕಾಗಿ ಬಂದಿದೆ.

ಇಲ್ಲಿ ಹತ್ತು ದಿನಗಳ ಕಾಲ ವಾಹನ ಸಂಚಾರ ಮೊಟಕುಗೊಂಡಿತ್ತು ತದನಂತರ ಊರವರ ಜನಪ್ರತಿ ನಿಧಿಗಳ ಒತ್ತಾಯದ ಮೇರೆಗೆ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಬಂಧಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು ಗುಡ್ಡವು ಸ್ವಲ್ಪ ಸ್ವಲ್ಪ ಜಾರುತ್ತಾ ಬಂದಿದ್ದು ಇದೀಗ ಸಂಪೂರ್ಣ ಕುಸಿತಗೊಂಡಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next