Advertisement

ರಸ್ತೆ ಸ್ವಚ್ಛಗೊಳಿಸಿದ ಗ್ರಾಪಂ ಸದಸ್ಯ

04:40 PM May 08, 2019 | Suhan S |

ಕೊರಟಗೆರೆ: ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಕೆಲ ತಿಂಗಳಿಂದ ವೇತನ ನೀಡಿಲ್ಲ ಎಂದು ಗ್ರಾಮದ ರಸ್ತೆಗಳನ್ನು ಸ್ವಚ್ಛಗೊಳಿಸಿರಲ್ಲಿಲ್ಲ. ಗಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯನೇ ತನ್ನ ಸ್ನೇಹಿತೊಂದಿಗೆ ರಸ್ತೆ ಯನ್ನು ಸ್ವಚ್ಛಗೊಳಿಸಿದ ಘಟನೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.

Advertisement

ಕೊರಟಗೆರೆ ತಾಲೂಕಿನ ಹೊಳವನ ಹಳ್ಳಿ ಹೋಬಳಿ ವ್ಯಾಪ್ತಿಯ ಬೈಚಾಪುರ ಗ್ರಾಪಂನಲ್ಲಿ ಸ್ವಚ್ಛತಾ ಕಾರ್ಯಕ್ಕೆ 3 ಮಂದಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಕಳೆದ ಕೆಲ ತಿಂಗಳಿಂದ ವೇತನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭೈಚಾಪುರ ಗ್ರಾಮದ ರಸ್ತೆ, ಚರಂಡಿಗಳನ್ನು ಸ್ವಚ್ಛತೆ ಮಾಡದೆ, ರಸ್ತೆಗಳಲ್ಲಿದ್ದ ಕಸದ ರಾಶಿಯಿಂದ ಗ್ರಾಮ ದಲ್ಲಿ ಸಾಂಕ್ರಾಮಿಕ ರೋಗಳು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮದ ಸಾರ್ವ ಜನಿಕರು ತಮ್ಮ ವ್ಯಾಪ್ತಿಯ ಸದಸ್ಯ ಹನುಮಂತರಾಯಪ್ಪನ ಗಮನಕ್ಕೆ ತಂದು ರಸ್ತೆ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದರು.

ಗ್ರಾಪಂ ಸದಸ್ಯ ಪಿಡಿಒಗೆ ಪೌರ ಕಾರ್ಮಿಕರಿಂದ ರಸ್ತೆ ಸ್ವಚ್ಛಗೊಳಿಸುವಂತೆ ತಿಳಿಸಿದರೂ, ಪೌರಕಾರ್ಮಿಕರು ಸ್ವಚ್ಛ ಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಒತ್ತಡದಿಂದ ಗ್ರಾಪಂ ಸದಸ್ಯ ಹನುಮಂತರಾಯಪ್ಪ ತನ್ನ ಸ್ನೇತರಾದ ಕೃಷ್ಣಮೂರ್ತಿ, ಸರೇಶ್‌ ಹಾಗೂ ಶಿವಾ ನಂದರೊಂದಿಗೆ ಸೇರಿ ಟ್ರ್ಯಾಕ್ಟರ್‌ ಬಾಡಿಗೆ ಪಡೆದು, ಬೈಚಾಪುರ ಗ್ರಾಮದ ರಸ್ತೆ ಯಲ್ಲಿದ್ದ ಕಸವನ್ನು ತಾವೇ ಸ್ವಚ್ಛಮಾಡಿ, ಗ್ರಾಮದ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next