Advertisement

ಹೊಸಂಗಡಿ ಬಾಳೇಬರೆ ಘಾಟಿಯಲ್ಲಿ ಮರ ಬಿದ್ದು ರಸ್ತೆ ಸಂಚಾರ ಬಂದ್

11:32 AM Jun 13, 2020 | sudhir |

ಹೊಸಂಗಡಿ ; ಬಾಳೇಬರೆ ಘಾಟಿಯಲ್ಲಿ ಶನಿವಾರ ಮರವೊವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಹೊಸಂಗಡಿ ಬಾಳೇಬರೆ ಘಾಟಿಯಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ.

Advertisement

ಬಾಳೇಬರೆ ಘಾಟಿಯಲ್ಲಿ ಮರಬಿದ್ದ ಪರಿಣಾಮ ಎರಡೂ ಕಡೆಯಿಂದ ಬಂದ ವಾಹನಗಳು ಸಂಚರಿಸಲಾಗದೆ ಸಾಲುಗಟ್ಟಿ ನಿಂತಿವೆ. ಸದ್ಯ ಮರ ತೆರವಿನ ಕಾರ್ಯ ನಡೆಯುತ್ತಿದೆ.

ಕಳೆದ ಎರಡು ದಿನಗಳಿಂದ ಕುಂದಾಪುರ ಪರಿಸರದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ, ಕುಂದಾಪುರ ತಾಲೂಕಿನಲ್ಲಿ ಮಳೆಯ ಆರಂಭದಲ್ಲೇ ಬೀಸಿದ ಬಾರಿ ಗಾಳಿಗೆ ಕೆಲವೊಂದು ಮನೆಯ ಹೆಂಚು, ಶೀಟ್ ಹಾರಿಹೋಗಿದ್ದು, ಕೆಲವು ಭಾಗಗಳಲ್ಲಿ ಅಂಗಡಿ ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next