Advertisement

ಹುಬ್ಬಳ್ಳಿ: ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ನೋಡಲು ಹೋದವರು ಅಪಘಾತಕ್ಕೆ ಬಲಿ!

11:52 AM Feb 23, 2021 | Team Udayavani |

ಹುಬ್ಬಳ್ಳಿ: ತಾಲೂಕಿನ ಶೆರೇವಾಡ ಟೋಲ್ ಗೇಟ್ ಬಳಿಯ ಕುಂದಗೋಳ ರಸ್ತೆಯಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

Advertisement

ಅಪಘಾತದಲ್ಲಿ ತಾಲೂಕಿನ ನೂಲ್ವಿ ಗ್ರಾಮದ ಶಂಕರಪ್ಪ ಬಸಲಿಂಗಪ್ಪ ಅಂಗಡಿ (27) ಹಾಗೂ ಕುಂದಗೋಳದ ಇಮ್ರಾನ್ ಉರುಫ್ ಇಸ್ಮಾಯಿಲ್ ಬಸೀರಸಾಬ್ ಹುಬ್ಬಳ್ಳಿ (20), ಮೈನುದ್ದೀನ್ ಬಾಷಾಸಾಬ್ ಮಿಶ್ರಿಕೋಟಿ (19) ಮೃತಪಟ್ಟಿದ್ದು, ನೂಲ್ವಿಯ ಸುರೇಶ ಜಂಗಪ್ಪ ವಲಮ್ಮನವರ ಗಾಯಗೊಂಡಿದ್ದಾನೆ.

ಇದನ್ನೂ ಓದಿ:ರಾಯಚೂರು: ಕಿರುಕುಳ ತಾಳದೆ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

ಕುಂದಗೋಳ ತಾಲೂಕ ಬಿಳೇಬಾಳ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದ ತನ್ನ ಸ್ನೇಹಿತನನ್ನು ನೋಡಲೆಂದು ಶಂಕರಪ್ಪನು ಬೈಕ್ ನಲ್ಲಿ ಸುರೇಶ ಜೊತೆ ಹೊರಟಿದ್ದ. ಕುಂದಗೋಳದಿಂದ ಇಮ್ರಾನ್ ನು ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಈ ಅವಘಡ ಉಂಟಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next