Advertisement

ರಸ್ತೆ ಅಪಘಾತ: ಶಾಸಕ ಭೀಮನಾಯ್ಕ್ ಪುತ್ರ ಸೇರಿ ಇಬ್ಬರು ಗಂಭೀರ

09:59 AM Aug 19, 2019 | Suhan S |

ಬಳ್ಳಾರಿ: ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

Advertisement

ಮರಿಯಮ್ಮನಹಳ್ಳಿ ಹತ್ತಿರದ ಸ್ಮಯೋರ್ ಕಾರ್ಖಾನೆ  ಬಳಿ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೊಸಪೇಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಹಗರಿಬೊಮ್ಮನಹಳ್ಳಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ  ಸರಕು ಸಾಗಿಸುವ ಟಾಟಾ ಏಸ್ ಮತ್ತು ಶಾಸಕರ ಪುತ್ರ ಸಂಚರಿಸುತ್ತಿದ್ದ ಆಡಿ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿದೆ.  ಕಾರಲ್ಲಿ ಏರ್ ಬಲೂನ್ ಓಪನ್ ಆದ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಅಶೋಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಎಂದು ವರದಿಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next