Advertisement

ಹಳೆಯಂಗಡಿ: ಅಪಘಾತ ಇಬ್ಬರಿಗೆ ಗಂಭೀರ ಗಾಯ

09:44 AM Aug 17, 2019 | Team Udayavani |

ಹಳೆಯಂಗಡಿ: ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಬೆಳ್ಳಾಯರು ಗ್ರಾಮದ ಚಂದ್ರಶೇಖರ ಹಾಗೂ ಅವರ ಪತ್ನಿ ದಿವ್ಯಾ ಗಾಯಾಳುಗಳು. ಇವರು ಬೈಕಿನಲ್ಲಿ ಪಡುಪಣಂಬೂರು ಶಾಲೆಯ ಬಳಿಯ ಡಿವೈಡರ್‌ ಸಮೀಪದ ರಸ್ತೆಯ ಮೂಲಕ ಹೆದ್ದಾರಿಯನ್ನು ದಾಟುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಡಸ್ಟರ್‌ ಕಾರು ನೇರವಾಗಿ ಇವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡರು.

ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್‌ ಸಾಲ್ಯಾನ್‌ ಹಾಗೂ ಇತರರು ಗಾಯಾಳುವನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು.

ಚಂದ್ರಶೇಖರ್‌ಗೆ ಗಂಭೀರವಾಗಿ ಗಾಯವಾಗಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಷ್ಟೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next