Advertisement

ಲಾರಿ-ಆಟೋ ಢಿಕ್ಕಿ: ಜಾತ್ರೆಯಿಂದ ಮರಳುತ್ತಿದ್ದ ಬಾಲಕ ಸಾವು

12:57 PM May 01, 2022 | Team Udayavani |

ಚಿಂಚೋಳಿ: ಲಾರಿ ಮತ್ತು ಆಟೋಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಕುಟುಂಬವೊಂದಕ್ಕೆ ತೀವ್ರ ಗಾಯವಾಗಿದ್ದು, ಮಗುವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಲೇಪೇಟ ಗ್ರಾಮದ ಬೆಡಕಪಳ್ಳಿ ಕ್ರಾಸ್‌ ಸಮೀಪ ಶುಕ್ರವಾರ ನಡೆದಿದೆ.

Advertisement

ಬೆಡಕಪಳ್ಳಿ ಗ್ರಾಮದ ಶ್ರೀಕಾಂತ ಸ್ವಾಮಿ ವಿಜಯಕುಮಾರಸ್ವಾಮಿ (8) ಮೃತಪಟ್ಟ ಮಗು.

ಬೆಡಕಪಳ್ಳಿ ಗ್ರಾಮದ ಶ್ರೀಕಾಂತ ಸ್ವಾಮಿ ವಿಜಯಕುಮಾರ ಸ್ವಾಮಿ ಎನ್ನುವರು ಕುಟುಂಬ ಸಮೇತ ಸುಲೇಪೇಟ ವೀರಭದ್ರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮರಳಿ ಆಟೋದಲ್ಲಿ ತಮ್ಮ ಗ್ರಾಮಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.

ಚಿಂಚೋಳಿ- ಸೇಡಂ ರಾಜ್ಯ ಹೆದ್ದಾರಿ ಹೊರವಲಯದಲ್ಲಿ ಸೇಡಂ ಕಡೆಯಿಂದ ವೇಗವಾಗಿ ಹೊರಟಿದ್ದ ಲಾರಿ, ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ವಂದನಾ ತಲೆಗೆ ತೀವ್ರ ಗಾಯವಾಗಿದೆ.

ಘಟನಾ ಸ್ಥಳಕ್ಕೆ ಸುಲೇಪೇಟ ಸಿಪಿಐ ಜಗದೀಶ ಕೆಜಿ, ಪಿಎಸ್‌ಐ ಸುಖಾನಂದ ಸಿಂಗ್‌ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಗಾಯಾಳುಗಳಿಗೆ ಸಿಗದ ಚಿಕಿತ್ಸೆ

ಚಿಂಚೋಳಿ-ಕಲಬುರಗಿ ರಸ್ತೆ ಮಾರ್ಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ವೈದ್ಯರು ಲಭ್ಯವಾಗಲಿಲ್ಲ. ನರ್ಸ್‌ ಮತ್ತು ಸಿಬ್ಬಂದಿ ಡ್ರೆಸ್ಸಿಂಗ್‌ ಮಾಡಿ ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ.

ಕರವೇ ಎಚ್ಚರಿಕೆ

ಖಾಲಿ ಇರುವ ಹುದ್ದೆಗಳನ್ನು ಸೇಡಂ ಶಾಸಕರು, ಡಿಎಚ್‌ಒ ಗಮನಹರಿಸಿ ಭರ್ತಿಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಮಲ್ಲಿಕಾರ್ಜುನ ಪಾಲಾದಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸಚಿನ್‌ ಚವ್ಹಾಣ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next