Advertisement

ಕುವೆಟ್ಟು: ರಿಕ್ಷಾ ಪಲ್ಟಿಯಾಗಿ ಓರ್ವ ಸಾವು

11:33 AM Dec 15, 2019 | sudhir |

ಬೆಳ್ತಂಗಡಿ: ಕುವೆಟ್ಟು ಗ್ರಾಮದ ವರಕಬೆಯಲ್ಲಿ ಡಿ.14ರಂದು ರಿಕ್ಷಾ ಮಗುಚಿ, ಪ್ರಯಾಣಿಕ ಸೋನಂದೂರಿನ ಕೃಷ್ಣನಗರ ನಿವಾಸಿ ಹರೀಶ್‌ ಶೆಟ್ಟಿ (45) ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್‌ ಅಶ್ವದ್‌ (24) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ನಡೆಯುವ ನೇಮದ ಪ್ರಯುಕ್ತ ಜಾತ್ರೆಯಲ್ಲಿ ಅಂಗಡಿ ಹಾಕಲೆಂದು ಹರೀಶ್‌ ಅವರು ರಿಕ್ಷಾದಲ್ಲಿ ಸಾಮಗ್ರಿ ಸಾಗಿಸುತ್ತಿದ್ದರು. ವರಕಬೆ ತಲುಪಿದಾಗ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಹೊಟ್ಟೆಗೆ ಬಲವಾದ ಏಟು ಬಿದ್ದಿದ್ದರಿಂದ ಹರೀಶ್‌ ಸ್ಥಳದಲ್ಲೇ ಮೃತಪಟ್ಟರು.

ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next